ಮಂಡ್ಯ : ಮತದಾನದ ಸಂದರ್ಭದಲ್ಲಿ ಮತ ಚಲಾಯಿಸುವ ಮೂಲಕ ಗಣ್ಯಾತಿಗಣ್ಯರು ಸುದ್ದಿಯಾಗುವುದು, ಪ್ರಚಾರ ಪಡೆಯುವುದು ಸಾಮಾನ್ಯ. ಆದರೆ ಮತ ಚಲಾಯಿಸದೆಯೂ ಸುದ್ದಿಗೆ ಗ್ರಾಸವಾಗುವ ಗಣ್ಯಾತಿಗಣ್ಯರು ಇರುವುದು ಕೂಡ ಅಷ್ಟೇ ಸಾಮಾನ್ಯ !
ಎಐಸಿಸಿ ಸಾಮಾಜಿಕ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವ ಹಾಗೂ ಮಂಡ್ಯ ಲೋಕಸಭಾ ಮಾಜಿ ಸಂಸದೆಯಾಗಿದ್ದ ಖ್ಯಾತ ಚಿತ್ರ ನಟಿ, ಕಾಂಗ್ರೆಸ್ ನಾಯಕಿ, ರಮ್ಯಾ ಅವರು ಇಂದು ರಾಜ್ಯ ವಿಧಾನಸಭಾ ಚುನವಾಣೆಯಲ್ಲಿ ಮತ ಚಲಾಯಿಸದಿರುವ ಮೂಲಕ ಭಾರೀ ಸುದ್ದಿಗೆ ವಿವಾದಕ್ಕೆ ಗುರಿಯಾಗಿದ್ದಾರೆ.
ಮಂಡ್ಯದ ವಿದ್ಯಾನಗರದ 10ನೇ ವಾರ್ಡ್ನ ಮತದಾರರಾಗಿರುವ ಮಾಜಿ ಸಂಸದೆ ರಮ್ಯಾ ಅವರ ಮನೆಗೆ ಬೀಗ ಹಾಕಲಾಗಿರುವುದು ಇಂದು ಕಂಡು ಬಂತು. ರಮ್ಯಾ ಅವರು ಮತ ಹಾಕಲು ಬಂದೇ ಬರುತ್ತಾರೆ ಎಂದು ಅವರಿಗಾಗಿ ತುದಿಕಾಲಲ್ಲಿ ಕಾದುನಿಂತಿದ್ದ ಅವರ ಅಭಿಮಾನಿಗಳಿಗೆ ಇಂದು ಭಾರೀ ನಿರಾಶೆ, ಅಚ್ಚರಿ ಉಂಟಾಯಿತು.
Comments are closed.