ಕರ್ನಾಟಕ

ಬೇರೆ ಬೇರೆ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ;ನಟರ ವಿರುದ್ದ HDK ಕಿಡಿ

Pinterest LinkedIn Tumblr


ಕೊಪ್ಪಳ : ಅಭ್ಯರ್ಥಿಗಳ ಪರ ಮಾತ್ರ ಪಕ್ಷದ ಪರವಲ್ಲ ಎಂದು ಬೇರೆ ಬೇರೆ ಪಕ್ಷಗಳ ಪರ ಪ್ರಚಾರ ಮಾಡುತ್ತಿರುವ ನಟರ ವಿರುದ್ಧ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರು ಶನಿವಾರ ಕಿಡಿ ಕಾರಿದ್ದಾರೆ.

‘ಬೇರೆ ಬೇರೆ ಪಕ್ಷಗಳ ಪರ ಪ್ರಚಾರ ಮಾಡಿ ಏನು ಸಂದೇಶ ನೀಡಲು ಹೊರಟಿದ್ದೀರಿ. ಇದು ಯಾವ ಸಿದ್ದಾಂತ. ಕರ್ನಾಟಕದ ಜನ ನಟರು ಪ್ರಚಾರ ಮಾಡಿದರೆಂದು ಮರಳಾಗುವವರಲ್ಲ’ ಎಂದರು.

ಮೋದಿ,ರಾಹುಲ್‌ ಇಬ್ಬರೂ ವಿದೂಷಕರು

‘ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಇಬ್ಬರೂ ರಾಜ್ಯದಲ್ಲಿ ವಿದೂಷಕರ ರೀತಿ ಹೇಳಿಕೆಗಳನ್ನು ನೀಡಿ ಹೋಗುತ್ತಿದ್ದಾರೆ. ಅವರು ರಾಜ್ಯಕ್ಕೆ ಕೊಟ್ಟ ಕೊಡುಗೆ ಏನು’ ಎಂದು ಪ್ರಶ್ನಿಸಿದರು.

-Udayavani

Comments are closed.