ಕರ್ನಾಟಕ

ಧಾರವಾಡದ ಹಳಿಯಾಳ ಬಳಿ ಸರ್ಕಾರಿ ಬಸ್ಸು–ಟವೇರಾ ಕಾರ್ ಡಿಕ್ಕಿ; ನಾಲ್ವರು ಬಲಿ

Pinterest LinkedIn Tumblr

ಧಾರವಾಡ: ಇಲ್ಲಿನ ಹಳಿಯಾಳ ಮಾರ್ಗ ಮಧ್ಯೆ ಮುರಕಟ್ಟಿ ಕ್ರಾಸ್ ಬಳಿ ಭಾನುವಾರ ಬೆಳಿಗ್ಗೆ ಟವೇರಾ ಕಾರ್‌ಗೆ ಸರ್ಕಾರಿ ಬಸ್ಸೊಂದು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಮೃತಪಟ್ಟಿದ್ದಾರೆ.

ಧಾರವಾಡದಿಂದ ಹಳಿಯಾಳಕ್ಕೆ ಹೊರಟಿದ್ದ ಟವೇರಾದಲ್ಲಿದ್ದ ನಾಲ್ವರು ಮೃತಪಟ್ಟಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತಪಟ್ಟವರನ್ನು ಧಾರವಾಡದ ಕಂಠಿ ಓಣಿ ನಿವಾಸಿಗಳಾದ ಇಮ್ರಾನ್ ಮಕಾನ್‌ದಾರ, ಆಫ್ರೀನ್ ಮಕಾನ್‌ದಾರ ಹಾಗೂ ಇವರ ಮಗಳು ಅಲ್ಸಿಯಾ ಎಂದು ಗುರುತಿಸಲಾಗಿದೆ. ಚಾಲಕ ಕೂಡ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಘಟನಾ ಸ್ಥಳಕ್ಕೆ ಧಾವಿಸಿದ ಅಳ್ನಾವರ ಪೊಲೀಸರು ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿದ್ದಾರೆ. ಅಳ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.