ಬೆಂಗಳೂರು: ರಸ್ತೆ ಅಪಘಾತದಿಂಡಾಗಿ ಮೂವರು ವಿದ್ಯಾರ್ಥಿನಿಯರು ದಾರುಣ ಸಾವಿಗೀಡಾದ ಘಟನೆ ಬೆಂಗಳೂರಿನ ನೈಸ್ ರಸ್ತೆಯಲ್ಲಿ ನಡೆದಿದೆ.
ಶುಕ್ರವಾರ ಬೆಳಿಗ್ಗೆ ಸಂಭವಿಸಿದ್ದ ಈ ದುರಂತದಲ್ಲಿ ಹರ್ಷ ಶ್ರೀವಾಸ್ತವ(24), ಆಶ್ರಯ (24) ಹಾಗೂ ಶ್ರುತಿ (24) ಎನ್ನುವ ಮೂವರು ಎಂಬಿಎ ವಿದ್ಯಾರ್ಥಿನಿಯರು ಸಾವಿಗೀಡಾಗಿದ್ದಾರೆ. ಇವರೆಲ್ಲರೂ ಅನೇಕಲ್ನ ಅಲೈಯನ್ಸ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ.
ಇದೇ ವೇಳೆ ಪ್ರವೀಣ್ ಮತ್ತು ಪವಿತ್ ಕೊಹ್ಲಿ ಎನ್ನುವ ಇನ್ನಿಬ್ಬರು ವಿದ್ಯಾರ್ಥಿಗಳು ಗಂಭೀರ ಗಾಯಗೊಂಡಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಕೊಪ್ಪಗೆಟ್ ಬಳಿಯ ನೈಸ್ ರಸ್ತೆ ಬ್ರಿಡ್ಜ್ ಕೆಳಗೆ ಬೆಳಿಗ್ಗೆ 8 ಗಂಟೆಯಲ್ಲಿ ಈ ಅವಘಡ ಸಂಭವಿಸಿದ್ದು ಅಪಘಾತಕ್ಕೀಡಾದ ಕಾರು ಝೂಮ್ ಸಂಸ್ಥೆಗೆ ಸೇರಿದ್ದೆಂದು ತಿಳಿದುಬಂದಿದೆ. ಕೇರಳ ಹಾಗೂ ಜಾರ್ಖಂಡ್ ಮೂಲದ ವಿದ್ಯಾರ್ಥಿಗಳು ಕಾರನ್ನು ಬಾಡಿಗೆಗೆ ಪಡೆದು ಔಟಿಂಗ್ ಗೆಂದು ತೆರಳಿದ್ದರು. ಇಂದು ಅವರು ಮತ್ತೆ ಕಾಲೇಜಿಗೆ ಹಿಂತಿರುಗುವ ವೇಳೆ ಕಾರು ಚಾಲಕನ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆ. ಘಟನೆ ಸಂಬಂಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Comments are closed.