ಶಿರಸಿ: ಉಳ್ಳಾಲ ಗ್ರಾಮದ ಸುತ್ತಮುತ್ತ ಓಡಾಡುತ್ತಿದ್ದ ಕುರುಡು ಆನೆಯೊಂದು ಭಾನುವಾರ ರಾತ್ರಿ ಮೃತಪಟ್ಟಿದ್ದು ಅದರ ಹೊಟ್ಟೆಯಲ್ಲಿದ್ದ ಮರಿಯೂ ಸಾವನ್ನಪ್ಪಿದೆ.
ಈ ಆನೆಗೆ ಕಣ್ಣು ಕಾಣುತ್ತಿರಲಿಲ್ಲ. ಕಳೆದ ಎರಡು ದಿನಗಳಿಂದ ಗ್ರಾಮದ ಸುತ್ತ ಅಲೆದಾಡುತ್ತಿತ್ತು. ಅಲ್ಲದೆ, ತುಂಬ ನಿತ್ರಾಣಗೊಂಡಿತ್ತು. ಅಷ್ಟಾದರೂ ಅಧಿಕಾರಿಗಳು ಕಾನೂನಿನ ನೆಪವೊಡ್ಡಿ ಚಿಕಿತ್ಸೆ ಕೊಡಿಸಲು ಹಿಂದೇಟು ಹಾಕಿದ್ದರಿಂದ ಜೀವ ಕಳೆದುಕೊಂಡಿದೆ.
ಮೃತ ಆನೆಯ ಮರಣೋತ್ತರ ಪರೀಕ್ಷೆ ನಡೆಸಿದಾಗ ಅದರ ಹೊಟ್ಟೆಯಲ್ಲಿ ಮರಿಯಿರುವುದು ಪತ್ತೆಯಾಗಿದೆ. ನಂತರ ಅದನ್ನು ವೈದ್ಯರು ತೆಗೆದಿದ್ದು ಅದೂ ಸಾವನ್ನಪ್ಪಿದೆ. ಗ್ರಾಮಸ್ಥರೆಲ್ಲ ಸೇರಿ ವಿಧಿ, ವಿಧಾನದೊಂದಿಗೆ ಅಂತ್ಯ ಸಂಸ್ಕಾರ ಮಾಡಿದರು.
Comments are closed.