ಕರ್ನಾಟಕ

ರಾಹುಲ್ ಭೇಟಿಯಿತ್ತ ಸ್ಥಳಕ್ಕೆ ಆರ್.ಎಸ್.ಎಸ್ ನಿಂದ ಶುದ್ದೀಕರಣ

Pinterest LinkedIn Tumblr


ಬಾಗಲಕೋಟೆ: ತಮ್ಮ ಜನಾಶೀರ್ವಾದದ ಅಂಗವಾಗಿ, ಉತ್ತರ ಕರ್ನಾಟಕ ದಲ್ಲಿ ಪ್ರವಾಸ ಮಾಡುತ್ತಿರುವ ರಾಹುಲ್ ಗಾಂಧಿ ಹೋದೆಡೆಯಲ್ಲೆಲ್ಲಾ ಕಾರ್ಯ ಕ್ರಮದ ವೇದಿಕೆಯನ್ನು ಆರ್‌ಎಸ್‌ಎಸ್‌ ಕಾರ್ಯಕರ್ತರು ಶುಚಿಗೊಳಿಸಿದ್ದಾರೆ.

ಎಐಸಿಸಿ ಅಧ್ಯಕ್ಷ ರಾಹುಲ್ ಅವರು ಬಂದು ಹೋದ ಸ್ಥಳದಲ್ಲಿ ಗೋಮಾತೆ ಪೂಜೆ ಮಾಡಿ, ಬಿಜೆಪಿ ಕಾರ್ಯಕರ್ತರು ಶುದ್ಧೀಕರಣ ಮಾಡಿದ್ದಾರೆ. ರಾಹುಲ್ ಗಾಂಧಿ ಅವರು ಕಳೆದ ದಿನ ಮುಚಖಂಡಿ ಕ್ರಾಸ್ ಮಾರ್ಗವಾಗಿ ಬಾಗಲಕೋಟೆ ನಗರದಲ್ಲಿ ಬಹಿರಂಗ ಸಭೆಯಲ್ಲಿ ಪಾಲ್ಗೊಂಡಿದ್ದರು. ಸಭೆ ಬಳಿಕ ಅವರು ಭೇಟಿ ನೀಡಿದ್ದ ನಗರದ ಮುಚಖಂಡಿ ಕ್ರಾಸ್‌‌ ಬಳಿ ಗೋಮಾತೆಗೆ ಪೂಜೆ ಮಾಡಿ ಶುದ್ಧೀ ಕರಣ ಮಾಡಿದ ಬಿಜೆಪಿ ಕಾರ್ಯಕರ್ತರು ಬಸವಣ್ಣನವರ ವಚನವನ್ನು ತಪ್ಪಾಗಿ ಓದುವ ಮೂಲಕ ಕನ್ನಡದ ಕಗ್ಗೊಲೆ ಮಾಡಿ ದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಹುಲ್ ಗಾಂಧಿ ವಚನವನ್ನು ತಪ್ಪಾಗಿ ಹೇಳಿ ಬಸವಣ್ಣನವರ ನೆಲಕ್ಕೆ ಅಪಮಾನ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಶುದ್ಧೀಕರಣ ಮಾಡುತ್ತಿದ್ದೇವೆ ಎಂದು ಬಿಜೆಪಿ ತನ್ನ ಕ್ರಮವನ್ನು ಸಮರ್ಥಿಸಿದೆ ಎಂದರು.

Comments are closed.