ಕರ್ನಾಟಕ

ಹಲ್ಲೆ ಆರೋಪಿ ನಲಪಾಡ್‌ ಸೇರಿ 8 ಜನ ನ್ಯಾಯಾಂಗ ಬಂಧನಕ್ಕೆ

Pinterest LinkedIn Tumblr


ಬೆಂಗಳೂರು: ಹಲ್ಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಶಾಂತಿನಗರ ಶಾಸಕ ಹ್ಯಾರಿಸ್‌ ಪುತ್ರ ಮಹಮ್ಮದ್‌ ನಲಪಾಡ್‌ ಸೇರಿ ಸಹಚರರ ನ್ಯಾಯಾಂಗ ಬಂಧನಕ್ಕೆ ಬೆಂಗಳೂರಿನ 8ನೇ ಎಪಿಎಂಸಿ ನ್ಯಾಯಾಲಯ ಆದೇಶಿಸಿದೆ.

ಇಂದು ಮಹಮ್ಮದ್‌ ನಲಪಾಡ್‌ ಸೇರಿದಂತೆ ಪ್ರಕರಣದ 8 ಜನ ಆರೋಪಿಗಳನ್ನು ನಗರದ 8 ನೇ ಎಪಿಎಂಸಿ ನ್ಯಾಯಾಲಯಕ್ಕೆ ಕಬ್ಬನ್‌ ಪಾರ್ಕ್‌ ಪೊಲೀಸರು ಹಾಜರುಪಡಿಸಿದ್ದರು. ಆದರೆ, ಕೋರ್ಟ್‌ ಮಾರ್ಚ್‌ 7ರ ವರೆಗೆ 14 ದಿನ ನ್ಯಾಯಾಂಗ ಬಂಧನವನ್ನು ವಿಧಿಸಿದೆ.

ಬೌರಿಂಗ್‌ ಆಸ್ಪತ್ರೆಯಲ್ಲಿ ಮೆಡಿಕಲ್‌ ಟೆಸ್ಟ್‌ ನಂತರ ಎಲ್ಲ ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಸದ್ಯ ಮಹಮ್ಮದ್‌ ನಲಪಾಡ್‌ ಮತ್ತು ಗ್ಯಾಂಗ್‌ ಪರಪ್ಪನ ಅಗ್ರಹಾರದ ಪಾಲಾಗಿದ್ದಾರೆ.

Comments are closed.