ಕರ್ನಾಟಕ

ಮೋದಿ-ಜಶೋದಾ ಬೆನ್ ಕುರಿತು ಸಹೋದರ ಪ್ರಹ್ಲಾದ್ ಮೋದಿ ಹೇಳಿದ್ದೇನು ಗೊತ್ತೇ..?

Pinterest LinkedIn Tumblr

ಬೆಂಗಳೂರು: ಕಾಂಗ್ರೆಸ್ಸಿಗರಿಗೆ ನರೇಂದ್ರ ಮೋದಿಯವರನ್ನು ಟೀಕಿಸಲು ಯಾವುದೇ ವಿಷಯ ಸಿಗುತ್ತಿಲ್ಲ. ಹೀಗಾಗಿ ಪದೇ ಪದೇ ಅತ್ತಿಗೆ ಯಶೋದಾ ಬೆನ್ ವಿಷಯವನ್ನು ಎಳೆದು ತರುವ ಪ್ರಯತ್ನ ಮಾಡುತ್ತಿದ್ದಾರೆ ಅಂತ ಮೋದಿ ಸಹೋದರ ಪ್ರಹ್ಲಾದ್ ಮೋದಿ ಸಿಡಿಮಿಡಿಗೊಂಡಿದ್ದಾರೆ.

ಬನಶಂಕರಿ ಬಳಿಯ ಶ್ರೀ ಕೃಷ್ಣ ಗ್ರೂಪ್ ಆಪ್ ಇನ್ಸ್ ಟ್ಯೂಟ್ ನಡೆದ ರಾಷ್ಟ್ರೀಯ ಯುವ ದಿನಾಚರಣೆಯಲ್ಲಿ ಅವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಟೀಕಿಸಲು ತಮಗೆ ಬೇರೆ ಯಾವುದೇ ವಿಷಯ ಸಿಗದ ಕಾರಣ ಹೀಗಾಗಿ ಕಾಂಗ್ರೆಸ್ ನವರು ಪದೇ ಪದೇ ಅತ್ತಿಗೆ ಜಶೋದಾ ಬೆನ್ ವಿಷಯವನ್ನು ಎಳೆದು ತರುವ ಪ್ರಯತ್ನ ಮಾಡುತ್ತಿದ್ದಾರೆ. ನಾವೂ ಕೂಡ ಅಣ್ಣ-ಅತ್ತಿಗೆಯನ್ನು ಒಂದು ಮಾಡುವ ಪ್ರಯತ್ನ ಮಾಡುವುದಿಲ್ಲ. ಅಣ್ಣ ತಂದೆಯ ಸಮಾನ. ಅವರ ವೈಯಕ್ತಿಕ ವಿಷಯದಲ್ಲಿ ನಾವು ತಲೆ ಹಾಕಲ್ಲ. ಅಲ್ಲದೇ ತಮ್ಮಕುಟುಂಬ ವರ್ಗದವರು ಯಾರೂ ಕೂಡ ರಾಜಕಾರಣಕ್ಕೆ ಬರಲ್ಲ. ಈ ರಾಷ್ಟ್ರ ರಾಜಕಾರಣಕ್ಕೆ ಒಬ್ಬ ಮೋದಿಯೇ ಸಾಕು ಎಂದರು.

ನಾನು ಪ್ರಧಾನಿ ಸಹೋದರನಾದರೂ ಸಣ್ಣ ರೇಷನ್ ಅಂಗಡಿ ನಡೆಸುತ್ತಿದ್ದೇನೆ. ಇಲ್ಲಿ ಯಾರೂ ದೊಡ್ಡವರೂ ಅಲ್ಲ. ಚಿಕ್ಕವರೂ ಅಲ್ಲ ಎಂದರು.

Comments are closed.