ಕರ್ನಾಟಕ

ಧನ್ಯಶ್ರೀ ಆತ್ಮಹತ್ಯೆ ಕೇಸ್; ಪ್ರಮುಖ ಆರೋಪಿ ಸಂತೋಷ್ ಬಂಧನ

Pinterest LinkedIn Tumblr


ಬೆಂಗಳೂರು: ಮೂಡಿಗೆರೆ ಕಾಲೇಜು ವಿದ್ಯಾರ್ಥಿನಿ ಧನ್ಯಶ್ರೀ ಆತ್ಮಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸಂತೋಷ್ ಎಂಬಾತನನ್ನು ಮೂಡಿಗೆರೆ ಪೊಲೀಸರು ಬಂಧಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ಮೂಲತಃ ದಕ್ಷಿಣ ಕನ್ನಡ ಬಂಟ್ವಾಳ ನಿವಾಸಿಯಾದ ಸಂತೋಷ್ ಅಲಿಯಾಸ್ ರಾಜೇಶ್ ಬಡಗ ಕಜೆಕಾರ್ ನಲ್ಲಿ ಲಿಫ್ಟ್ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ. ಧನ್ಯ ಆತ್ಮಹತ್ಯೆ ಘಟನೆ ಬಳಿಕ ಸಂತೋಷ್ ನಾಪತ್ತೆಯಾಗಿದ್ದ,

ಫೋನ್ ಕರೆ ಡೀಟೈಲ್ಸ್ ಹಾಗೂ ಲೋಕೇಶನ್ ಆಧಾರದ ಮೇಲೆ ಮೂಡಿಗೆರೆ ಪಿಎಸ್ಐ ರಫೀಕ್ ಹಾಗೂ ಪೊಲೀಸರು ಸಂತೋಷ್ ನನ್ನು ಬೆಂಗಳೂರಿನಲ್ಲಿ ಬಂಧಿಸಿರುವುದಾಗಿ ವರದಿ ವಿವರಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮೂಡಿಗೆರೆ ಬಿಜೆಪಿ ನಗರ ಯುವಮೋರ್ಚಾ ಅಧ್ಯಕ್ಷ ಅನಿಲ್‌ನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.

-ಉದಯವಾಣಿ

Comments are closed.