ಕರ್ನಾಟಕ

ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಒಳ್ಳೆ ಹುಡ್ಗ ಪ್ರಥಮ್ ಈ ಬಾರಿ ಯಾರ ಪರ ಮನವಿ ಸಲ್ಲಿಸಿದ್ದಾರೆ ನೋಡಿ…

Pinterest LinkedIn Tumblr

ಒಳ್ಳೆ ಹುಡುಗ ಪ್ರಥಮ್‌ ನಿಜವಾಗಲೂ ಒಳ್ಳೆ ಹುಡುಗ ಎಂಬುದನ್ನು ಮತ್ತೊಮ್ಮೆ ಪ್ರೂವ್ ಮಾಡಿದ್ದಾರೆ. ವಿಜಯಪುರದ ಬಾಲಕಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಸಂಬಂಧ ಪ್ರಥಮ್ ದನಿಯೆತ್ತಿದ್ದಾರೆ.

ಮಹದಾಯಿ ಪ್ರತಿಭಟನೆ ವೇಳೆ ರೈತರಿಗೆ ತಮ್ಮ ಕೈಯಾರ ಊಟ ಮಾಡಿಸಿ ಅವರಿಗೆ ಪ್ರಥಮ್‌ ಸಾಂತ್ವನ ಹೇಳಿದ್ದರು. ಬಳಿಕ ಕೆ.ಎಸ್‌‌‌. ಅಶ್ವತ್ಥ್‌‌ ಪುತ್ರ ಶಂಕರ್ ಅಶ್ವತ್ಥ್ ಕ್ಯಾಬ್‌‌ ಡ್ರೈವರ್ ಆಗಿ ಕೆಲಸ ಮಾಡುತ್ತಿರುವ ವಿಷಯ ತಿಳಿದು ಕಳೆದ ವಾರ ಅವರ ಮನೆಗೆ ಹೋಗಿ ತಮ್ಮ ಸಿನಿಮಾದಲ್ಲಿ ನಟಿಸಲು ಆಫರ್ ನೀಡಿದ್ದಾರೆ.

ಇದರ ಬೆನ್ನಲ್ಲೇ ಇತ್ತೀಚೆಗೆ ಕಾಮುಕರ ಅಟ್ಟಹಾಸಕ್ಕೆ ಬಲಿಯಾದ ವಿಜಯಪುರದ ಬಾಲಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯರನ್ನು ಪ್ರಥಮ್‌ ಭೇಟಿ ಆಗಿದ್ದಾರೆ. ಈ ವೇಳೆ ಅಪರಾಧಿಗಳಿಗೆ ಶಿಕ್ಷೆ ಆಗಲೇಬೇಕು ಎಂದು ಮನವಿ ಮಾಡಿದ್ದಾರೆ.

ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದ ಪ್ರಥಮ್‌‌, ತ್ವರಿತಗತಿ ನ್ಯಾಯಾಲಯದಲ್ಲಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಶೀಘ್ರ ಇತ್ಯರ್ಥಪಡಿಸುವುದು, ಸಂತ್ರಸ್ತೆಯ ಕುಟುಂಬದವರಿಗೆ ನೀಡಲಾಗುವ ಪರಿಹಾರದ ಮೊತ್ತವನ್ನು ಹೆಚ್ಚಿಸುವುದು, ಬಾಲಕಿ ಮನೆಯ ಯಾವುದಾದರೂ ಸದಸ್ಯರಿಗೆ ಸರ್ಕಾರಿ ಕೆಲಸ ನೀಡುವುದು ಹಾಗೂ ಇನ್ನು ಮುಂದೆ ಅಪ್ರಾಪ್ತರ ಮೇಲೆ ಇಂತಹ ದೌರ್ಜನ್ಯ ನಡೆಯದಂತೆ ಕಾನೂನುಗಳನ್ನು ಮತ್ತಷ್ಟು ಬಲಪಡಿಸಿ ಎಂದು ಪ್ರಥಮ್‌ ತಾವು ಬರೆದ ಮನವಿ ಪತ್ರವನ್ನು ಸಿಎಂ ಗೆ ಸಲ್ಲಿಸಿದ್ದಾರೆ.

Comments are closed.