ಕರ್ನಾಟಕ

ಟೀ ಶಾಪ್‌ನಲ್ಲಿ ಕಡತಗಳಿಗೆ ಸಹಿ ಹಾಕಿದ ತಹಶೀಲ್ದಾರ್!

Pinterest LinkedIn Tumblr

ತುಮಕೂರು: ಶಿರಾ ತಾಲೂಕಿನ ತಹಶೀಲ್ದಾರ್ ಗಂಗೇಶ್ ಅವರು ಕಡತಗಳನ್ನು ಟೀ ಅಂಗಡಿಗೆ ತರಿಸಿಕೊಂಡು ಸಹಿ ಮಾಡುವ ಮೂಲಕ ಚಹಾ ಅಂಗಡಿಯನ್ನೇ ಕಚೇರಿ ಮಾಡಿಕೊಂಡಿದ್ದಾರೆ.

ಭಾನುವಾರ ತುಮಕೂರು ನಗರದ ವಿಶ್ವವಿದ್ಯಾಲಯದ ಮುಂಭಾಗದಲ್ಲಿರುವ ಬಾಯರ್ ಕಾಫಿ ಶಾಪ್‌ನಲ್ಲಿ ಕುಳಿತು ಹಲವು ಕಡತಗಳಿಗೆ ಸಹಿ ಹಾಕಿದ್ದು, ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಕಂದಾಯ ಇಲಾಖೆಯ ಅನೇಕ ಕಡತಗಳನ್ನು ತರಿಸಿಕೊಂಡು ಸುಮಾರು 30 ನಿಮಿಷಗಳ ಕಾಲ ಕುಳಿತು ಸಹಿ ಹಾಕಿದ್ದಾರೆ. ಈಗಾಗಲೇ ಹಲವು ಎಡವಟ್ಟು ಮಾಡಿಕೊಂಡಿರುವ ತಹಶೀಲ್ದಾರ್ ಗಂಗೇಶ್ ಚಿಕ್ಕನಾಯಕನಹಳ್ಳಿ ಯಿಂದ ಶಿರಾಗೆ ವರ್ಗಾವಣೆ ಆಗಿದ್ದರು.

Comments are closed.