ಬಳ್ಳಾರಿ: ಮೂರನೇ ಮದುವೆಯಾದ ವೈದ್ಯನೊಬ್ಬನಿಗೆ ಮೊದಲ ಪತ್ನಿ ಆಸ್ಪತ್ರೆಯಲ್ಲೇ ಗೂಸಾ ನೀಡಿ ಮದುವೆ ಹುಚ್ಚು ಬಿಡಿಸಿದ ಘಟನೆ ನವೋದಯ ಆಸ್ಪತ್ರೆಯಲ್ಲಿ ನಡೆದಿದೆ.
ಹೊಸ ಬಸ್ ನಿಲ್ದಾಣದ ಬಳಿ ಇರುವ ಆಸ್ಪತ್ರೆಯಲ್ಲಿ ರಣರಂಗ ನಿರ್ಮಾಣವಾಗಿತ್ತು. ಆಸ್ಪತ್ರೆಯಲ್ಲಿದ್ದ ಜನರೆಲ್ಲಾ ಯಾರೋ ರೋಗಿಗಳ ಕಡೆಯವರ ಜಗಳ ಎಂದು ತಿಳಿದಿದ್ದರು. ಆದರೆ ಅಲ್ಲಿ ಮಹಿಳೆಯೊಬ್ಬರು ವೈದ್ಯನಿಗೇ ಹಿಗ್ಗಾಮುಗ್ಗಾ ಥಳಿಸುತ್ತಿದ್ದರು.
ರಾಮಾಂಜನೇಯ ಎಂಬ ವೈದ್ಯ 11 ವರ್ಷಗಳ ಹಿಂದೆ ಶಶಿರೇಖಾ ಎನ್ನುವರನ್ನು ಪ್ರೇಮ ವಿವಾಹವಾಗಿದ್ದು, ಆ ಬಳಿಕ ಇಬ್ಬರ ನಡುವೆ ಜಗಳವಾಗುತ್ತಿತ್ತು ಎನ್ನಾಲಗಿದೆ. ಜಗಳದ ವೇಳೆ ರಾಮಾಂಜನೇಯ ಅಲಿಯಾಸ್ ರಾಮುವಿಗೆ ಗಂಡಸುತನದ ಬಗ್ಗೆಯೇ ಶಶಿರೇಖಾ ಸವಾಲು ಹಾಕಿದ್ದರು ಎನ್ನಲಾಗಿದೆ.
ಶಶಿರೇಖಾರಿಂದ ದೂರವಾಗಿದ್ದ ರಾಮು ಇನ್ನಿಬ್ಬರನ್ನು ವಿವಾಹವಾಗಿದ್ದು ಆವರಿಗೂ ಮಕ್ಕಳನ್ನು ಕರುಣಿಸಿದ್ದಾರೆ ಎಂದು ತಿಳಿದು ಬಂದಿದೆ.
ಮಾಧ್ಯಮದವರು ಪ್ರಶ್ನಿಸಿದಾಗ ಉತ್ತರಿಸಿದ ರಾಮು ‘ಶಶಿರೇಖಾಗೂ ಮಗುವಾಗಿದೆ ಆದರೆ ಅದು ನನ್ನದಲ್ಲ , ಆಕೆ ನನ್ನ ತಾಯಿ ,ಮಕ್ಕಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾಳೆ.ನಾನು ಆಕೆಗೆ ತಿಂಗಳಿಗೆ 60 ಸಾವಿರ ರೂಪಾಯಿಯನ್ನೂ ನೀಡುತ್ತಿದ್ದೇನೆ’ಎಂದು ಹೇಳಿಕೊಂಡಿದ್ದಾರೆ. ಇದೀಗ ಜಗಳ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.
-ಉದಯವಾಣಿ
Comments are closed.