ಕರ್ನಾಟಕ

ಯೋಗೀಶ್‌ ಗೌಡ ಹತ್ಯೆಯಲ್ಲಿ ಸಚಿವ ವಿನಯ್‌ ಕೈವಾಡವಿಲ್ಲ: ರಾಮಲಿಂಗಾರೆಡ್ಡಿ

Pinterest LinkedIn Tumblr


ತುಮಕೂರು: ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್‌ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಣಿ ಮತ್ತು ಭೂ ವಿಜ್ಞಾನ ಸಚಿವ ವಿನಯ್‌ ಕುಲಕರ್ಣಿ ಕೈವಾಡ ಇದೆ ಎನ್ನುವುದು ಸುಳ್ಳು ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ”ವಿನಯ್‌ ಕುಲಕರ್ಣಿ ಕೈವಾಡ ಇದೆ ಎನ್ನುವ ಬಗ್ಗೆ ಪರಿಶೀಲನೆ ಆಗಬೇಕು. ದೂರವಾಣಿಯಲ್ಲಿ ವಕೀಲರೊಂದಿಗೆ ಮಾತನಾಡಿ ಬೆದರಿಕೆ ಹಾಕಿರುವ ಧ್ವನಿ ಸಚಿವರದ್ದೇ ಎಂದು ಗುರುತಿಸಬೇಕು. ಇದನ್ನು ಗುರುತಿಸಲು ಲ್ಯಾಬ್‌ಗೆ ಕಳುಹಿಸುತ್ತಿದ್ದು, ಆನಂತರವಷ್ಟೇ ನಿಖರ ಮಾಹಿತಿ ತಿಳಿಯಲಿದೆ,” ಎಂದರು.

”ಬಿಜೆಪಿಯವರಿಗೆ ಏನೂ ಕೆಲಸವಿಲ್ಲದ ಕಾರಣಕ್ಕೆ ಎಲ್ಲರಿಗೂ ರಾಜೀನಾಮೆ ಕೊಡಿ ಎಂದು ಕೇಳುತ್ತಿದ್ದಾರೆ. ಯೋಗೀಶ್‌ ಗೌಡನ ಹತ್ಯೆಯು ಜಮೀನು ವಿವಾದಕ್ಕೆ ಸಂಬಂಧಿಸಿದ್ದು. ಅದಕ್ಕೂ ಸಚಿವರಿಗೂ ಸಂಬಂಧವಿಲ್ಲ”ಎಂದು ಗೃಹ ಸಚಿವರು ಹೇಳಿದರು.

Comments are closed.