ಕರ್ನಾಟಕ

40 ವಾಹನಗಳ ಗ್ಲಾಸ್ ಒಡೆದ ಕಿಡಿಗೇಡಿಗಳು

Pinterest LinkedIn Tumblr


ಬೆಂಗಳೂರು: ಯಡಿಯೂರು ಲೇಕ್‌ನ ದುರ್ಗ ಪರಮೇಶ್ವರಿ ರಸ್ತೆಯಲ್ಲಿ ಮನೆಗಳ ಮುಂದೆ ನಿಲ್ಲಿಸಿದ್ದ 40 ವಾಹನಗಳ ಗ್ಲಾಸ್‌ಗಳನ್ನು ಕಿಡಿಗೇಡಿಗಳು ಒಡೆದಿದ್ದಾರೆ.

9 ಕಾರು, 6 ಆಟೊ , 3 ಟಾಟಾಯೇಸ್ಗಳ ಗ್ಲಾಸ್‌ ಒಡೆದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ರಾತ್ರಿ 10 ಗಂಟೆಗೆ ಏಳು ಜನ ಕಿಡಿಗೇಡಿಗಳು ಬೈಕ್‌ನಲ್ಲಿ ಬಂದು ಗ್ಲಾಸ್ ಒಡೆದಿದ್ದು ಮನೆ ಮುಂದೆ ನಿಂತಿದ್ದ ವ್ಯಕ್ತಿಗೂ ಲಾಂಗ್ ಬೀಸಿ ಪರಾರಿಯಾಗಿದ್ದಾರೆ. ಬನಶಂಕರಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Comments are closed.