ಕರ್ನಾಟಕ

ಬೀದರ್‌ ರಸ್ತೆ ಅಪಘಾತ: ಮದುವೆ ಆಗಬೇಕಿದ್ದ ಜೋಡಿ ಸೇರಿ 4 ಸಾವು

Pinterest LinkedIn Tumblr


ಬೀದರ್: ವೇಗವಾಗಿ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಪರಿಣಾಮವಾಗಿ ನಾಲ್ವರು ಮೃತಪಟ್ಟಿದ್ದಾರೆ.

ಈ ನಾಲ್ವರ ಪೈಕಿ ಇಬ್ಬರು ಮುಂದಿನ ತಿಂಗಳು ಮದುವೆ ನಿಶ್ಚಯವಾಗಿತ್ತು. ಈ ಹಿನ್ನೆಲೆಯಲ್ಲಿ ಘಾಣಗಾಪುರದ ದತ್ತನ ದರ್ಶನ ಪಡೆದುಕೊಂಡು ವಾಪಸ್‌ ಹೋಗುವಾಗ ಈ ದುರ್ಘಟನೆ ನಡೆಸಿದೆ.

ಹುಮನಾಬಾದ್ ತಾಲೂಕು ಬಸಂತಪುರ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ.

ಮೃತರನ್ನು ಸವಿತಾಬಾಯಿ ನಾರಾಯಣರಾವ್‌ (45), ಅನುಸಿಯಾ ಬಾಲಾಜಿ (50), ಹಣಮಂತ ನಾರಾಯಣ, (23), ಪ್ರಿಯಾ ಬಾಲಾಜಿ (21) ಎಂದು ಗುರುತಿಸಲಾಗಿದೆ.

ಹಣಮಂತ ಮತ್ತು ಪ್ರಿಯಾ ಅವರ ವಿವಾಹ ಮುಂದಿನ ನಿಶ್ಚಯವಾಗಿತ್ತು.

ಮೃತರೆಲ್ಲರೂ ಮಹಾರಾಷ್ಟ್ರದ ಉದಗೀರ್‌ ಗ್ರಾಮದವರಾಗಿದ್ದಾರೆ.

ಹುಮ್ನಾಬಾದ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.