ಕರ್ನಾಟಕ

ಹೆಂಡ್ತಿಯನ್ನು ಕೊಂದು ಶವ ತೋರಿಸಲು ಪೊಲೀಸರನ್ನು ಕರೆದೊಯ್ದಾಗ ಶವ ಎದ್ದು ಕೂತಿತ್ತು…!

Pinterest LinkedIn Tumblr

ಬೆಂಗಳೂರು: ಕುಡಿದ ಮತ್ತಲ್ಲಿ ಹೆಂಡತಿಯನ್ನು ಹತ್ಯೆ ಮಾಡಿದ್ದೇನೆ ಎಂದು ಪತಿ ಪೊಲೀಸ್ ಠಾಣೆಗೆ ಹೋಗಿ ಶರಣಾಗಿರುವ ಘಟನೆ ಚನ್ನನಾಯಕನ ಪಾಳ್ಯದಲ್ಲಿ ನಡೆದಿದೆ. ಆದರೆ ಇದನ್ನು ಕೇಳಿ ಮನೆಗೆ ಬಂದ ಪೊಲೀಸರಿಗೆ ನಿಜಕ್ಕೂ ಶಾಕ್ ಕಾದಿತ್ತು.

ಕುಡಿದ ಮತ್ತಲ್ಲಿ ರಘುಗೌಡ ಎಂಬಾತ ಪತ್ನಿಗೆ ಹೊಡೆದಿದ್ದಾನೆ. ಹೊಡೆತಕ್ಕೆ ಪತ್ನಿ ಪುಷ್ಪಲತಾ ಕೆಳಗೆ ಬಿದ್ದು ಮೂರ್ಛೆ ಹೋಗಿದ್ದಾರೆ. ಇದನ್ನು ಕಂಡ ಪತಿ ಹೆಂಡತಿ ಸತ್ತು ಹೋಗಿದ್ದಾಳೆ ಎಂದು ಭಾವಿಸಿ, ಬಾಗಲಗುಂಟೆ ಪೊಲೀಸ್ ಠಾಣೆಗೆ ತೆರಳಿ ಘಟನೆ ವಿವರಿಸಿ ಶರಣಾಗಿದ್ದಾನೆ.

ರಘುಗೌಡನ ಮಾತು ಕೇಳಿ ಘಟನಾ ಸ್ಥಳಕ್ಕೆ ಬಂದ ಪೊಲೀಸರಿಗೆ ನಿಜಕ್ಕೂ ಅಚ್ಚರಿ ಕಾದಿತ್ತು. ಕೊಲೆಯಾಗಿದ್ದಾಳೆ ಎಂದು ಭಾವಿಸಿದ್ದ ಪುಷ್ಪಲತಾ ಎದ್ದು ಕುಳಿತಿದ್ದಳು. ಇದನ್ನು ನೋಡಿದ ಪೊಲೀಸರೇ ಒಂದು ಕ್ಷಣ ಅವಕ್ಕಾಗಿದ್ದಾರೆ.

Comments are closed.