ಬೆಂಗಳೂರು: ನಗರದ ವಿವಿಧೆಡೆ ದೀಪಾವಳಿ ಸಂಭ್ರಮದ ವೇಳೆ ಪಟಾಕಿ ಅವಘಡ ಸಂಭವಿಸಿದ್ದು , ಇಬ್ಬರು ಯುವಕರು ಸೇರಿದಂತೆ 11 ಮಂದಿ ಗಾಯಾಳುಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ನಾರಾಯಣ ನೇತ್ರಾಲಯದಲ್ಲಿ 8 ಮಂದಿ ದಾಖಲಾಗಿದ್ದು 6 ಮಕ್ಕಳು ಮತ್ತು ಇಬ್ಬರು ಯುವಕರು ಆ ಪೈಕಿ ಸೇರಿದ್ದಾರೆ.
ಮಿಂಟೋ ಆಸ್ಪತ್ರೆಗೆ 3 ಜನ ಮಕ್ಕಳು ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಹೆಚ್ಚಿನವರಿಗೆ ಕಣ್ಣೀಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.
ಆಡುಗೋಡಿ ಯಲ್ಲಿ ಶಾರುಖ್ ಎಂಬ ಯುವಕ ಯಾರೋ ಹಚ್ಚಿದ ರಾಕೆಟ್ ತಗುಲಿ ಎಡಗಣ್ಣನ್ನೇ ಕಳೆದುಕೊಂಡಿದ್ದಾನೆ.
-ಉದಯವಾಣಿ
Comments are closed.