ಕರ್ನಾಟಕ

ರೌಡಿಗಳಿಂದ ಪೊಲೀಸರ ಮೇಲೇ ದಾಳಿಗೆ ಸ್ಕೆಚ್ಚು!

Pinterest LinkedIn Tumblr


ಕಡಬಗೆರೆ ಸೀನನ ಮೇಲಿನ ಶೂಟೌಟ್ ಬಳಿಕ ನಗರದಲ್ಲಿ ರೌಡಿಗಳ ಹೆಡೆಮುರಿ ಕಟ್ಟಲು ಬೆಂಗಳೂರು ಪೊಲೀಸರು ಮುಂದಾಗಿದ್ದಾರೆ. ಈ ಮಧ್ಯೆ, ತಮ್ಮ ಬೆನ್ನುಬಿದ್ದಿರುವ ಪೊಲೀಸರ ವಿರುದ್ಧವೇ ದಾಳಿ ನಡೆಸಲು ರೌಡಿಗಳು ಮುಂದಾಗಿದ್ದಾರೆ ಎಂಬ ಆಘಾತಕಾರಿ ಸುದ್ದಿ ಬೆಳಕಿಗೆ ಬಂದಿದೆ.

ಒಂಟೆ ರೋಹಿತ್, ಸೈಲೆಂಟ್ ಸುನೀಲನ ಬಂಧನದ ಬಳಿಕ ಪೊಲೀಸರ ರೌಡಿಗಳು ನಗರದ ಹೊರವಲಯದ ಅಪಾರ್ಟ್`ಮೆಂಟ್ ಒಂದರಲ್ಲಿ ರಹಸ್ಯ ಸಭೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ನಗರದಲ್ಲಿ ರೌಡಿಗಳ ಉಪಟಳ ಮಿತಿ ಮೀರಿದೆ, ಕಾನೂನು ಉಲ್ಲಂಘಿಸುವವರನ್ನ ಸುಮ್ಮನೆ ಬಿಡುವುದಿಲ್ಲ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಎಚ್ಚರಿಕೆ ನೀಡಿದ್ದರು.

Comments are closed.