ರಾಷ್ಟ್ರೀಯ

ಶಶಿಕಲಾ ಕಪಿಮುಷ್ಠಿಯಿಂದ ಪಾರಾದ 19 ಎಐಎಡಿಎಂಕೆ ಶಾಸಕರು!

Pinterest LinkedIn Tumblr


ಚೆನ್ನೈ,: ಮುಖ್ಯಮಂತ್ರಿ ಹುದ್ದೆಯ ಪ್ರಬಲ ಆಕಾಂಕ್ಷಿಯಾಗಿರುವ ಶಶಿಕಲಾ ಬಣದಲ್ಲಿದ್ದ 19 ಶಾಸಕರು ಇದೀಗ ನಾಪತ್ತೆಯಾಗಿರುವುದು ಮತ್ತಷ್ಟು ಕುತೂಹಲ ಕೆರಳಿಸಿದೆ.

ನಗರದ ರೆಸಾರ್ಟ್‌‌ನಲ್ಲಿ ವಾಸ್ತವ ಹೂಡಿದ್ದ 120 ಶಾಸಕರಲ್ಲಿ 19 ಶಾಸಕರು ಕಾಣೆಯಾಗಿದ್ದಾರೆ. ರಾಜ್ಯಪಾಲ ವಿದ್ಯಾಸಾಗರ್ ರಾವ್ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿಯೇ ಶಾಸಕರು ಕಾಣೆಯಾಗಿರುವುದು ಶಶಿಕಲಾ ಬಣಕ್ಕೆ ಆಘಾತ ಉಂಟು ಮಾಡಿದೆ.

ಇಂದು ಮಧ್ಯಾಹ್ನ ನಗರಕ್ಕೆ ಆಗಮಿಸಿದ ರಾಜ್ಯಪಾಲ ವಿದ್ಯಾಸಾಗರ್ ರಾವ್, ಸಂಜೆ ಐದು ಗಂಟೆಗೆ ಸಿಎಂ ಪನ್ನೀರ್ ಸೆಲ್ವಂ ಅವರನ್ನು ಭೇಟಿ ಮಾಡಲಿದ್ದು, ಸಂಜೆ 7.30 ಗಂಟೆಗೆ ಶಶಿಕಲಾ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಎಐಎಡಿಎಂಕೆ ಪಕ್ಷದ 135 ಶಾಸಕರು ತಮ್ಮನ್ನು ಬೆಂಬಲಿಸುತ್ತಿದ್ದು ಅಗತ್ಯವಾದಲ್ಲಿ ಶಾಸಕರ ಪರೇಡ್ ನಡೆಸಲು ಸಿದ್ದ ಎಂದು ಶಶಿಕಲಾ ಘೋಷಿಸಿದ್ದಾರೆ.

ಚೆನ್ನೈನ ಹೊರವಲಯದಲ್ಲಿರುವ ಗೋಲ್ಡನ್ ಬೇ ರೆಸಾರ್ಟ್‌ನಲ್ಲಿ ಶಶಿಕಲಾ ಬೆಂಬಲಿತ ಶಾಸಕರು ವಾಸ್ತವ್ಯ ಹೂಡಿದ್ದು,ಇದೀಗ 19 ಶಾಸಕರು ಕಾಣೆಯಾಗಿರುವುದು ತಲೆನೋವು ತಂದಿದೆ. ಶಾಸಕರು ರೆಸಾರ್ಟ್‌ನಲ್ಲಿಯೇ ಅಡಗಿರಬಹುದು ಎಂದು ಶಂಕಿಸಲಾಗಿದೆ.

ಎಐಎಡಿಎಂಕೆ ನಾಯಕರು ಕಾಣೆಯಾದ ಶಾಸಕರ ಹುಡುಕಾಟಕ್ಕೆ ತೀವ್ರ ಶೋಧ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

Comments are closed.