ಕಲಬುರಗಿ (ಫೆ.04): ತನಿಖೆಗೆಂದು ಬಂದಿದ್ದ ಪೊಲೀಸ್ ಅಧಿಕಾರಿಯನ್ನೇ ಚಿನ್ನದ ವ್ಯಾಪಾರಿಗಳು ಕೂಡಿ ಹಾಕಿದ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಆಗಮಿಸಿದ್ದ ಅಶೋಕನಗರ ಠಾಣೆಯ ಇನ್ಸ್ಪೆಕ್ಟರ್ ಜೇಮ್ಸ್ ಅವರನ್ನು ವ್ಯಾಪಾರಿಗಳು ಕೂಡಿ ಹಾಕಿದ್ದಾರೆ.
ಕಲಬುರಗಿ ನಗರದ ಸರಾಪ್ ಬಜಾರ್ನ ಗಜಾನನ ಜ್ಯುವೆಲ್ಲರಿ ಶಾಪ್’ನಲ್ಲಿ ಘಟನೆ ನಡೆದಿದ್ದು, ಪೊಲೀಸರು ತಮ್ಮ ಅಧಿಕಾರಿಯನ್ನು ಬಿಡಿಸಿಕೊಂಡು ಹೋಗಲು ಲಾಠಿ ಚಾರ್ಜ್ ನಡೆಸಬೇಕಾಯಿತು.
ವಿನಾಕಾರಣ ಪೊಲೀಸರು ತೊಂದರೆ ಕೊಡುತ್ತಿದ್ದಾರೆ ಎಂದು ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದ್ದು,ಹೆಚ್ಚುವರಿ ಎಸ್.ಪಿ. ಜಯಪ್ರಕಾಶ ಭೇಟಿ ನೀಡಿದ್ದಾರೆ.
ಕರ್ನಾಟಕ
Comments are closed.