ಕರ್ನಾಟಕ

ಅನಾಥ ಹುಡುಗ ನೆರೆಮನೆ ಹುಡುಗಿಯೊಂದಿಗೆ ಪರಾರಿ: ಗುಪ್ತಾಂಗಕ್ಕೆ ಖಾರದ ಪುಡಿ ಶಿಕ್ಷೆ!

Pinterest LinkedIn Tumblr


ಬೆಂಗಳೂರು(ಜ. 18): ಕನಿಕರದಿಂದ ಅನಾಥ ಹುಡುಗನಿಗೆ ಮನೆಯಲ್ಲಿ ಆಶ್ರಯ ಕೊಟ್ಟಿದ್ದಕ್ಕೆ ಇಬ್ಬರು ಮಹಿಳೆಯರು ಹಿಗ್ಗಾಮುಗ್ಗ ಥಳಿಸಿಕೊಳ್ಳಬೇಕಾದ ಸ್ಥಿತಿ ಎದುರಾಯಿತು. ಪಕ್ಕದ ಮನೆಯ ಹುಡುಗಿ ಜೊತೆ ಆ ಹುಡುಗ ಓಡಿಹೋದ ಬಳಿಕ ಹುಡುಗಿಯರ ಮನೆಯವರ ಆಕ್ರೋಶ ವ್ಯಕ್ತವಾಗಿದ್ದು ಈ ಇಬ್ಬರು ಮಹಿಳೆಯರ ಮೇಲೆ. ನಂದಿನಿ ಲೇಔಟ್’ನಲ್ಲಿ ಘಟನೆ ವರದಿಯಾಗಿದ್ದು, ಅಯೇಶಾ ಮತ್ತಾಕೆಯ ತಾಯಿ ರಜಿಯಾ ಮೇಲೆ ಯುವತಿಯ ಪೋಷಕರು ಹಾಗೂ ಮಹಿಳಾ ಸಂಘದ ಕಾರ್ಯಕರ್ತರು ಹಲ್ಲೆ ಎಸಗಿದ್ದಾರೆ. ಆದರೆ, ಯುವಕ ಶಬುಲ್ ಓಡಿಹೋಗಿದ್ದಕ್ಕೂ ಅವರಿಗೂ ಯಾವುದೇ ಸಂಬಂಧವಿಲ್ಲದಿದ್ದರೂ ಐಶಾ ಕುಟುಂದವರು ಹೊಡೆತ ತಿನ್ನಬೇಕಾಯಿತು.
ಏನಿದು ಘಟನೆ?
ಅಯೇಶಾಳ ತಾಯಿ ರಜಿಯಾಗೆ ಶಬುಲ್ ಎಂಬ ಯುವಕ ಪರಿಚಿಯವಾಗುತ್ತಾನೆ. ದಿಕ್ಕು ದೆಶೆ ಇಲ್ಲದ ಈತನಿಗೆ ರಜಿಯಾ ತನ್ನ ಮನೆಯಲ್ಲೇ ಊಟ ತಿಂಡಿ ಮಾಡಿಕೊಡುತ್ತಿರುತ್ತಾಳೆ. 3 ತಿಂಗಳಿನಿಂದ ಆತ ರಜಿಯಾ ಮನೆಯಲ್ಲಿ ಆಶ್ರಯ ಪಡೆದಿರುತ್ತಾನೆ. ಕೆಲ ದಿನಗಳ ಹಿಂದೆ ಪಕ್ಕದ ಬೀದಿಯ ಹರ್ಷಿಯಾ ಎಂಬ ಹುಡುಗಿ ಜೊತೆ ಶಬುಲ್’ಗೆ ಪ್ರೇಮಾಂಕುರವಾಗುತ್ತದೆ. ಜನವರಿ 14ರಂದು ಹರ್ಷಿಯಾ ಜೊತೆ ಶಬುಲ್ ಪರಾರಿಯಾಗಿಬಿಡುತ್ತಾನೆ. ಇದು ಅಯೇಶಾ ಮತ್ತು ರಜಿಯಾಗೂ ಶಾಕ್ ನೀಡಿರುತ್ತದೆ.
ಆದರೆ, ಹರ್ಷಿಯಾ ತಾಯಿ ರೋಷನಿ ಅವರು ಮಹಿಳಾ ಸಂಘದ ಕಾರ್ಯಕರ್ತರ ಜೊತೆ ಸೇರಿಕೊಂಡು ಅಯೇಶಾ ಮತ್ತು ರಜಿಯಾಳ ಮೇಲೆ ಹಲ್ಲೆ ಮಾಡುತ್ತಾರೆ. ಓಡಿಹೋದ ಹುಡುಗನ ಮಾಹಿತಿ ಕೊಡಬೇಕು ಎಂದು ಒತ್ತಾಯಿಸಿ ಹಿಗ್ಗಾಮುಗ್ಗ ಥಳಿಸುತ್ತಾರೆ.
ಗುಪ್ತಾಂಗಕ್ಕೆ ಖಾರದ ಪುಡಿ: ರೋಷನಿ ಕಡೆಯವರು ಐಶಾಳ ಗುಪ್ತಾಂಗಕ್ಕೆ ಖಾರದಪುಡಿ ಎರಚಿ ಅಮಾನವೀಯವಾಗಿ ವರ್ತಿಸುತ್ತಾರೆ. ತಮ್ಮದೇನೂ ತಪ್ಪಿಲ್ಲ ಎಂದು ಪರಿಪರಿಯಾಗಿ ಬೇಡಿಕೊಂಡರೂ ಇಡೀ ರಾತ್ರಿ ಮನೆಯೊಂದರಲ್ಲಿ ಕೂಡಿಹಾಕಿ ಐಶಾ ಮೇಲೆ ದೌರ್ಜನ್ಯ ಎಸಗುತ್ತಾರೆ. ಅಯೇಶಾ ತಾಯಿ ರಜಿಯಾಳನ್ನು ಬೆತ್ತಲೆಯಾಗಿಸಿ ನಿಲ್ಲಿಸಿ ಹಿಗ್ಗಾಮುಗ್ಗಾ ಭಾರಿಸುತ್ತಾರೆ.
ಘಟನೆ ಬಳಿಕ ಅಯೇಶಾ ಮತ್ತು ರಜಿಯಾ ಇಬ್ಬರೂ ನಂದಿನಿ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡುತ್ತಾರೆ.

Comments are closed.