ಕರ್ನಾಟಕ

ಕಾವೇರಿ ನದಿಯಲ್ಲಿ ಮುಳುಗಿ ಬೆಂಗಳೂರಿನ ಇಬ್ಬರು ವಿದ್ಯಾರ್ಥಿಗಳ ಸಾವು

Pinterest LinkedIn Tumblr

ಮೈಸೂರು: ಬೆಂಗಳೂರಿನ ಇಬ್ಬರು ವಿದ್ಯಾರ್ಥಿಗಳು ಕಾವೇರಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

20 ವರ್ಷದ ಶ್ರೀನಿವಾಸ್ ಮತ್ತು 21 ವರ್ಷದ ದೇವರಾಜು ಮೃತ ದುರ್ದೈವಿಗಳು. ಮತ್ತೊಬ್ಬ ವಿದ್ಯಾರ್ಥಿ ಮಹದೇವ ಎಂಬಾತನನ್ನು ಸ್ಥಳೀಯರು ರಕ್ಷಿಸಿ ಕೆ. ಆರ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಬೆಂಗಳೂರಿನ ಬಿಷಪ್ ಕಾಟನ್ ಕಾಲೇಜಿನ ಬಿಕಾಂ ವಿದ್ಯಾರ್ಥಿಗಳಾಗಿರುವ ಇವರು ಇತರೆ 54 ವಿದ್ಯಾರ್ಥಿಗಳೊಂದಿಗೆ ಶಿವಸಮುದ್ರ, ಗಗನ ಚುಕ್ಕಿ ಮತ್ತು ಭರಚುಕ್ಕಿ ಜಲಪಾತ ನೋಡಲು ಪ್ರವಾಸಕ್ಕಾಗಿ ಬಂದಿದ್ದರು.

ಎಲ್ಲಾ ಸ್ಥಳಗಳನ್ನು ನೋಡಿಕೊಂಡು ಊಟ ಮಾಡಿ ವೆಸೆಲ್ಲಿ ಸೇತುವೆ ಬಳಿ ಈಜಲು ತೆರಳಿದ್ದಾರೆ. ಈಜು ಬಾರದ ಶ್ರೀನಿವಾಸ್ ಮತ್ತು ದೇವರಾಜು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಈಟ ಮಾಡುತ್ತಿದ್ದ ಇತರ ಸಹಪಾಠಿಗಳು ಶಿಕ್ಷಕರು ಮಹದೇವ್ ನನ್ನು ರಕ್ಷಿ,ಸಿದ್ದಾರೆ. ಶವಗಳ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

Comments are closed.