ಕರ್ನಾಟಕ

ನನ್ನ ಕತ್ತರಿಸಿದರೂ ಬಿಜೆಪಿಯಲ್ಲೇ ಇರುತ್ತೇನೆ: ಈಶ್ವರಪ್ಪ

Pinterest LinkedIn Tumblr


ಶಿವಮೊಗ್ಗ(ಜ.12): ನನ್ನ ಕತ್ತರಿಸಿದರೂ ನಾನಿಲ್ಲೇ ಇರ್ತಿನೆ. ಬಿಜೆಪಿ ನನ್ನ ತಾಯಿ ಇದ್ದಂತೆ, ನಾನು ಬಿಎಸ್‌ವೈ ಅಣ್ಣತಮ್ಮ ಇದ್ದಂಗೆ.ನಮ್ಮ ಗೊಂದಲಗಳು ಸರಿಯಾಗುಕತ್ತೆ ಎಂದು ತಮ್ಮ ಹಾಗೂ ಬಿಎಸ್’ವೈ ಅವರ ಬಗ್ಗೆ ಇರುವ ಗೊಂದಲಗಳ ಬಗ್ಗೆ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು,ಬೆಂಗಳೂರಿನಲ್ಲಿ ಎಂಎಲ್’ಸಿಗಳ ಸಭೆ ನಡೆಯುತ್ತಿದೆ. ಕಾರಣಾಂತರಗಳಿಂದ ಸಭೆಗೆ ಹೋಗಲು ಸಾಧ್ಯವಾಗಲಿಲ್ಲ. ಅಲ್ಲದೆ ಬ್ರಿಗೆಡ್ ಸಭೆಗೆ ಹೋಗದಂತೆ ಕಾರ್ಯಕರ್ತರಿಗೆ ಎಚ್ಚರಿಕೆ ಕೊಟ್ಟಿದ್ದಾರೆ. ಅದನ್ನು ಯಾರು ಗಂಭೀರವಾಗಿ ಪರಿಗಣಿಸಬೇಕಾಗಿಲ್ಲ ಎಂದು ಹೇಳಿದರು.
ಬಿಎಸ್ವೈ ಲಿಂಗಾಯುತರ ಸಭೆಗಳಿಗೆ, ಪ್ರಹ್ಲಾದ್ ಜೋಷಿ,ಅನಂತ್ ಕುಮಾರ್ ಬ್ರಾಹ್ಮಣ ಸಭೆಗಳಿಗೆ ಹೋಗುವಂತೆ ನಾನು ಬ್ರಿಗೇಡ್ ಸಭೆಗಳಲ್ಲಿ ಭಾಗವಹಿಸೊದು ತಪ್ಪಲ್ಲ. ಕಾರ್ಯಕರ್ತರು ಸಭೆಗೆ ಹೋಗೋದರಲ್ಲಿ ತಪ್ಪಿಲ್ಲ. ಬಿಎಸ್‌ವೈ ಬಿಟ್ಟು ಬೇರಾರು ಬ್ರಿಗೆಡ್ ವಿರೋಧಿಸುತ್ತಿಲ್ಲ ಎಂದು ತಿಳಿಸಿದರು.

Comments are closed.