ಕರ್ನಾಟಕ

ಮೇಟಿ ರಾಸಲೀಲೆ ಸಿಡಿಯನ್ನು ಎಫ್‍ಎಸ್‍ಎಲ್‍ಗೆ ಕಳುಹಿಸಲು ಸಿದ್ಧತೆ

Pinterest LinkedIn Tumblr

meti111
ಬೆಂಗಳೂರು: ಮಾಜಿ ಸಚಿವ ಎಚ್.ವೈ.ಮೇಟಿ ಪ್ರಕರಣದ ಸಿಡಿಯನ್ನು ಎಫ್‍ಎಸ್‍ಎಲ್‍ಗೆ ಕಳುಹಿಸಲು ಸಿದ್ಧತೆ ನಡೆದಿದೆ.

ದೂರುದಾರೆ ವಿಜಯಲಕ್ಷ್ಮಿ ಹೇಳಿಕೆಯನ್ನು ಆಧರಿಸಿ ಸಿಐಡಿ ತನಿಖೆಯನ್ನು ನಡೆಸ್ತಾ ಇದೆ. ಆದ್ರೆ, ಸಿಡಿ ಸರಿಯಾಗಿ ಕಾಣ್ತಿಲ್ಲ. ಅದ್ರಲ್ಲಿ ಇರೋ ಸಂತ್ರಸ್ತೆ ಯಾರು ಅನ್ನೋದು ಗೊತ್ತಾಗಿಲ್ಲ. ಸಿಡಿಯಲ್ಲಿರುವ ದೃಶ್ಯ ಎಡಿಟ್ ಆಗಿರೋದ್ರಿಂದ ಸಂತ್ರಸ್ತೆಯ ಮಾಹಿತಿ ಸಿಗುತ್ತಿಲ್ಲ ಎಂದು ಎಫ್‍ಎಸ್‍ಎಲ್ ವರದಿ ನೀಡಿದ್ರೆ, ಸಿಡಿ ಬಿಡುಗಡೆ ಮಾಡಿದವರು ಎಡಿಟ್ ಮಾಡದೇ ಇರೋ ವಿಷ್ಯೂವಲ್ ಬಿಡ್ತಾರಾ ಅನ್ನೋದನ್ನ ನೋಡ್ಬೇಕಿದೆ.

ಆದರೆ ಆರೋಪ ಸಾಬೀತಾದ್ರೆ ಮೇಟಿಯನ್ನು ಬಂಧಿಸಿ ವಿಚಾರಣೆ ಮಾಡುವ ಅವಕಾಶ ಕೂಡ ಸಿಐಡಿಗೆ ಇರೋದ್ರಿಂದ ಸಿಡಿ ಲೀಲೆ ಇನ್ನು ಎಷ್ಟು ದಿನ ಮುಂದುವರಿಯುತ್ತೋ ಗೊತ್ತಿಲ್ಲ. ಆದರೆ ಸಿಐಡಿಗೆ ಮತ್ತೊಂದು ಅವಕಾಶವಿದ್ದು, ಸಂತ್ರಸ್ತೆ ಬಗ್ಗೆ ಸುಳಿವು ಸಿಗುತ್ತಿಲ್ಲ ಎಂಬ ವರದಿಯನ್ನೂ ಕೊಡಬಹುದು. ಆ ರೀತಿ ಏನಾದ್ರೂ ವರದಿ ಬಿಡುಗಡೆಯಾದ್ರೆ, ಎಡಿಟ್ ಮಾಡದೇ ಇರುವ ಸಿಡಿ ಬಿಡುಗಡೆ ಮಾಡಬಹುದು ಎನ್ನಲಾಗಿದೆ.

Comments are closed.