ಕರ್ನಾಟಕ

ಪ್ರೀತಿ ಪ್ರಸಂಗ: ನಾಪತ್ತೆಯಾಗಿದ್ದ ಯುವಕನ ಶವ ರುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಪತ್ತೆ

Pinterest LinkedIn Tumblr

mys-death-696x475-fiಮೈಸೂರು: ನಾಪತ್ತೆಯಾಗಿದ್ದ ಯುವಕನೊಬ್ಬ ಶವವಾಗಿ ಪತ್ತೆಯಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಸುಣ್ಣದಕೇರಿ ನಿವಾಸಿ ಅಭಿಲಾಷ್(25) ಸಾವನ್ನಪ್ಪಿದ ಯುವಕ. ಆಗಸ್ಟ್ 23 ರಿಂದ ಈತ ನಾಪತ್ತೆಯಾಗಿದ್ದು, ಇದೀಗ ಮೈಸೂರಿನ ಕ್ರೀಡಾ ಪೆವಿಲಿಯನ್ ಹಿಂಭಾಗದಲ್ಲಿರುವ ರೈಲ್ವೇ ಹಳಿ ಮೇಲೆ ಶವವಾಗಿ ಪತ್ತೆಯಾಗಿದ್ದಾನೆ.

ಪ್ರೇಮ ಪ್ರಸಂಗ: ಈತನ ಅನುಮಾನಸ್ಪದ ಸಾವಿನ ಹಿಂದೆ ಪ್ರೀತಿ ಪ್ರಸಂಗವಿದೆ ಎಂದು ಹೇಳಲಾಗುತ್ತಿದ್ದು, ಕಳೆದ ಮೂರು ವರ್ಷಗಳಿಂದ ಯುವತಿಯನ್ನ ಅಭಿಲಾಷ್ ಪ್ರೀತಿಸುತ್ತಿದ್ದ. ಆದರೆ ಕೆಲವು ದಿನಗಳ ಹಿಂದೆ ಆಕೆ ಬೇರೆ ಯುವಕನ ಜೊತೆ ಸ್ನೇಹ ಬೆಳೆಸಿದ್ದಳಂತೆ. ಹೀಗಾಗಿ ಅಭಿಲಾಷ್ ಕೋಪಗೊಂಡು ಆಕೆಯ ಆಶ್ಲೀಲ ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದನಂತೆ.

ಇದರಿಂದ ಮುಜುಗರಕ್ಕೀಡಾಗಿದ್ದ ಯುವತಿ ಅಭಿಲಾಷ್ ವಿರುದ್ಧ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ಆದ್ರೆ ದೂರು ದಾಖಲಾದ ದಿನದಿಂದಲೇ ಅಭಿಲಾಷ್ ನಾಪತ್ತೆಯಾಗಿದ್ದ. ಆದ್ರೆ ಇಂದು ಬೆಳಗ್ಗೆ ರೈಲ್ವೇ ಹಳಿ ಮೇಲೆ ಶವವಾಗಿ ಪತ್ತೆಯಾಗಿದ್ದಾನೆ.

ಘಟನೆಯಲ್ಲಿ ಅಭಿಲಾಷ್ ತಲೆ ತುಂಡಾಗಿರುವ ಕಾರಣ ಮಗನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಅಭಿಲಾಷ್ ಪೋಷಕರು, ರೈಲ್ವೇ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Comments are closed.