ಕರಾವಳಿ

ವಿಶ್ವ ತುಳು ಅಯೊನೊ 2016 ಅಧ್ಯಕ್ಷರಾಗಿ ಅಬುಧಾಬಿಯ ಸರ್ವೋತ್ತಮ ಶೆಟ್ಟಿ

Pinterest LinkedIn Tumblr

sarvo-rajyotsava-hon-1

ಕರ್ನಾಟಕ ಕಡಲ ತೀರದ ಗಡಿನಾಡು ಕಾಸರಗೋಡಿನ ಬದಿಯಡ್ಕದಲ್ಲಿ 2016 ಡಿಸೆಂಬರ್ 9ರಿಂದ 13ರವರೆಗೆ ನಡೆಯಲಿರುವ ಐತಿಹಾಸಿಕ “ವಿಶ್ವ ತುಳುವೆರೆ ಅಯನೊ” ದ ತುಳು ಸಾಹಿತ್ಯ ಸಮ್ಮೇಳನದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗೌರವ ಅಧ್ಯಕ್ಷ ಸ್ಥಾನ ಪಡೆದಿರುವ ಅಬುಧಾಬಿಯ ಶ್ರೀ ಸರ್ವೋತ್ತಮ್ ಶೆಟ್ಟಿಯವರ ಹೆಜ್ಜೆ ಗುರುತಿನ ಅವಲೋಕನ…..

sarvo-5

ವಿಶ್ವದಾದ್ಯಂತ ತುಳು ಭಾಷೆಗೆ ಸೇವೆ ಸಲ್ಲಿಸುತ್ತಿರುವ 156 ತುಳು ಸಂಘಟನೆಗಳಿದೆ. ಯು.ಎ.ಇ. ಯಲ್ಲಿರುವ ತುಳು ಸಂಘಟನೆಗಳ ಮೂಲಕ ಕಳೆದ ಮೂರು ದಶಕಗಳಿಂದ ತುಳು ಭಾಷೆಗಾಗಿ ತಮ್ಮ ಅಮೂಲ್ಯ ಸಮಯವನ್ನು ವಿನಿಯೋಗಿಸಿ ಗಲ್ಫ್ ದೇಶದಲ್ಲಿ ತುಳುಭಾಷೆಯನ್ನು ಸದಾ ಹಸಿರಾಗಿರಿಸಿದ ಅಬುಧಾಬಿಯಲ್ಲಿರುವ ಸರ್ವೋತ್ತಮ್ ಶೆಟ್ಟಿಯವರಿಗೆ “ವಿಶ್ವ ತುಳುವೆರೆ ಅಯನೊ” ದ ತುಳು ಸಾಹಿತ್ಯ ಸಮ್ಮೇಳನದ ಗೌರವ ಸ್ಥಾನ ಅಧ್ಯಕ್ಷ ಪಟ್ಟ ಲಭಿಸಿರುವುದು ಅರಬ್ ಸಂಯುಕ್ತ ಸಂಸ್ಥಾನದಲ್ಲಿ ನೆಲೆಸಿರುವ ಅನಿವಾಸಿ ತುಳುವರಿಗೆ ಸಂದ ಗೌರವವಾಗಿದೆ.

sarvo-family

ಅಪ್ಪಟ ಭಾರತೀಯನಾಗಿ, ಕನ್ನಡ, ತುಳು ಧ್ವಜವನ್ನು ಗಲ್ಪ್ ನಾಡಿನಲ್ಲಿ ಎತ್ತಿ ಹಿಡಿದ ತುಳುಮಣ್ಣಿನ ಮಗ ಸರ್ವೋತ್ತಮ ಶೆಟ್ಟಿಯವರ ತನ್ನೊಳಗೆ ಇರುವ ಕಲೆ, ಸಂಸ್ಕೃತಿ, ಭಾಷೆ, ನಟನೆ, ಅಭಿಮಾನ, ವಾಕ್ ಚಾತುರ್ಯತೆ, ಸೇವಾಮನೋಭಾವನೆ ಓರ್ವ ನಾಯಕನಿಗೆ ಇರಬೇಕಾದ ಎಲ್ಲಾ ಆರ್ಹತೆಯನ್ನು ಸಾಕ್ಷೀಕರಿಸಿದ ಆಕರ್ಷಕ ವ್ಯಕ್ತಿತ್ವದ ನಾಯಕ ಸರ್ವೋತ್ತಮ ಶೆಟ್ಟಿಯವರು ಸರ್ವಕಾಲಿಕ ಮಾನ್ಯರು. ಗಲ್ಫ್ ದೇಶದಲ್ಲಿ ಹಲವಾರು ನಾಯಕರನ್ನು ಸೃಷ್ಠಿಸುವ ಕೀರ್ತಿ ಇವರದ್ದು.

sarvo-kirita-hon

ತುಳುನಾಡಿನ ಕಡಲ ತಡಿಯ ಉಡುಪಿ ಜಿಲ್ಲೆ ಮಣಿಪಾಲದ ಹತ್ತಿರದ ಪಾರೀಕಾದಲ್ಲಿ ಸುಸಂಸ್ಕೃತ ಕುಟಂಬದ ಶ್ರೀ ಸೂರಪ್ಪ ಹೆಗ್ಡೆ ಮತ್ತು ಶ್ರೀಮತಿ ಸರಸ್ವತಿ ಶೆಟ್ಟಿ ದಂಪತಿಗಳ ಮಗನಾಗಿ ಜನಿಸಿ ಉತ್ತಮ ಪರಿಸರದಲ್ಲಿ ಬೆಳೆದು ತನ್ನ ಪ್ರಾಥಮಿಕ, ಪದವಿಪೂರ್ವ ವಿದ್ಯಾಭ್ಯಾಸವನ್ನು ಪೆರ್ಡೂರು, ಹಿರಿಯಡ್ಕದಲ್ಲಿ ಮುಗಿಸಿ, ಮುಂಬೈಯಲ್ಲಿ ಪೊದ್ದಾರ್ ಕಾಲೇಜಿನಲ್ಲಿ ವಾಣಿಜ್ಯ ಪದವಿಯನ್ನು ಪಡೆದರು. ತಮ್ಮ ವಿದ್ಯಾರ್ಥಿ ಜೀವನದ ಅವಧಿಯಲ್ಲಿ 1978ರಲ್ಲಿ ಮುಂಬೈ ವಿಶ್ವವಿದ್ಯಾಲಯದ ಸೆನೆಟ್ ಪ್ರತಿನಿಧಿಯಾಗಿ ನಾಯಕತನದ ಶಕ್ತಿಯನ್ನು ಮೈಗೂಡಿಸಿದ್ದರು.

sarvo-1

ಪ್ರಖ್ಯಾತ ನಾಟಕಕಾರ ಪರ್ವತವಾಣಿಯವರ ಕೃತಿ “ಹಗ್ಗದ ಕೊನೆ” ನಾಟಕದ ಮೂಲಕ ಅಂತರ ಕಾಲೇಜು ನಾಟಕ ಸ್ಪರ್ಧೆಯಲ್ಲಿ ಮೊದಲ ಹೆಜ್ಜೆಯಲ್ಲೆ ದಾಖಲೆಯೊಂದಿಗೆ ಕಲಾರಂಗದ ಪಯಣ ಮುಂದುವರಿಯಿತು. ತಮ್ಮ ವ್ಯಾಸಂಗದ ಅವದಿಯಲ್ಲಿ ಪ್ರಥಮ ಬಾರಿಗೆ ಮುಂಬೈ ಆರ್. ಎ. ಪೊದ್ದಾರ್ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಸಂಘಟನೆಯ ಸ್ಥಾಪನೆ. ಹಲವಾರು ನಾಟಕಗಳ ಸ್ಪರ್ಧೆಯಲ್ಲಿ ಪ್ರಥಮಸ್ಥಾನ, ಕನ್ನಡ ಚಲನಚಿತ್ರ ನಿರ್ದೆಶಕರಾದ ಶ್ರೀ ವಿಶು ಕುಮಾರ್ ರವರಿಂದ ಪ್ರಶಸ್ತಿ ಸ್ವೀಕಾರ, ಕ್ರೀಡಾ ಕೂಟದಲ್ಲಿ ಮೆಲುಗೈ, ಕ್ರಿಕೆಟ್ ಆಟಗಾರರಾದ ಭಾರತದ ಸುನಿಲ್ ಗವಾಸ್ಕರ್, ಪಾಕಿಸ್ಥಾನದ ಬೌಲರ್ ಸಪ್ರ್ರಾಜ್ ಖಾನ್ ರವರಿಂದ ಬಹುಮಾನ ಸ್ವೀಕಾರ. ಭಾರತ ತಂಡದ ಕ್ರಿಕೆಟ್ ಪಟು ವೆಂಗ್ ಸರ್ಕಾರ್, ಮಹಾರಾಷ್ಟ್ರದ ಪ್ರಖ್ಯಾತ ರಾಜಕಾರಣಿ ಗುರುದಾಸ್ ಕಾಮತ್ ಇವರ ಸಹಪಾಠಿಯಾಗಿದ್ದಾರೆ.

sarvo-hon-7

1979ರಲ್ಲಿ ಕಾಲೇಜು ವಿದ್ಯಾಭ್ಯಾಸ ಮುಗಿಸಿದ ನಂತರ ಕಲೆಗೆ ಸೂಕ್ತ ವೇದಿಕೆಯನ್ನು ರೂಪಿಸಲು ಓದಿದ ಕಾಲೇಜಿನ ಹವ್ಯಾಸಿ ಕಲಾವಿದರು, ಸ್ನೇಹಿತರೊಂದಿಗೆ “ಕನ್ನಡ, ತುಳು” ಭಾಷೆಯ ಕಲಾಸಂಸ್ಥೆ ಕಟ್ಟಿದರು ” ಕಲಾ ಜಗತ್ತು” ಜನ್ಮತಾಳಿ, ಸ್ಥಾಪಕ ಅಧ್ಯಕ್ಷರಾಗಿ ಸೇವೆಸಲ್ಲಿಸುವುದರ ಮೂಲಕ ಕರ್ನಾಟಕದ ಕಲಾ ಪರಂಪರೆಯ ಕೀರ್ತಿಪತಾಕೆ ಹೊರನಾಡಿನ ಮುಂಬೈಯಲ್ಲಿ ಎತ್ತಿ ಹಿಡಿದರು. ” ಕಲಾ ಜಗತ್ತು” ಕಳೆದ 37 ವರ್ಷಗಳಿಂದಲೂ ಸತತವಾಗಿ ಕನ್ನಡ, ತುಳು ನಾಟಕಗಳನ್ನು ಪ್ರದರ್ಶಿಸುತ್ತಾ ಅಗ್ರಸ್ಥಾನದಲ್ಲಿದ್ದಾರೆ.

sarvo-6

ಮುಂಬೈಯ ಸಿಂಡಿಕೆಟ್ ಬ್ಯಾಂಕಿನಲ್ಲಿ ಹತ್ತು ವರ್ಷಗಳ ಕಾಲ ಉದ್ಯೋಗದಲ್ಲಿದ್ದು ನಂತರ ಗಲ್ಪಿನತ್ತ ಪಯಣ, ಅಬುಧಾಬಿಯಲ್ಲಿ ಉನ್ನತ ಹುದ್ದೆಯೊಂದಿಗೆ ಗಲ್ಪಿನಲ್ಲಿ ಜೀವನ ಪ್ರಾರಂಭ, ಇಂಟರ್ ನ್ಯಾಶನಲ್ ಡಿಸ್ಟ್ರಿಬ್ಯೂಶನ್ ಸಂಸ್ಥೆಯಲ್ಲಿ ಪ್ರಧಾನ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಣೆ, ಸಂಸ್ಥೆಯ ಉನ್ನತಿಯಲ್ಲಿ ತನ್ನ 26 ವರ್ಷಗಳ ಸುಧೀರ್ಘ ಸೇವೆಯ ನಂತರ ಅಬುಧಾಬಿಯಲ್ಲಿ ಕಳೆದ ಹನ್ನೆರಡು ವರ್ಷಗಳಿಂದ ಸ್ವಂತ ಅಟೊಮೊಬೈಲ್ ಸಂಸ್ಥೆಯನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತಿದ್ದಾರೆ.

ಕಳೆದ ಮೂರು ನಾಲ್ಕು ದಶಕಗಳಿಂದ ಗಲ್ಫಿನಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗ ತುಳು ಮತ್ತು ಪ್ರತಿಭೆಗಳಿಗೆ ಹಲವು ಸಂಘ ಸಂಸ್ಥೆಗಳ ವೇದಿಕೆಯಲ್ಲಿ ಅವಕಾಶ ಕಲ್ಪಿಸಿ ಕೊಟ್ಟು ಪೋತ್ಸಾಹ ನೀಡಿದ್ದಾರೆ.

sarvo-mix-1

ಅಬುಧಾಬಿಯಲ್ಲಿರುವ ಇಂಡಿಯಾ ಸೋಶಿಯಲ್ ಅಂಡ್ ಕಲ್ಚರಲ್ ಸೆಂಟರ್ 1995 ರಲ್ಲಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಸರ್ವೋತ್ತಮ್ ಶೆಟ್ಟಿಯವರು 45 ವರ್ಷಗಳ ಇತಿಹಾಸದಲ್ಲಿ ಪ್ರಥಮ ಕನ್ನಡಿಗ ಅಧ್ಯಕ್ಷನಾಗಿ 1999-2000ರಲ್ಲಿ ಆಯ್ಕೆಯಾಗಿ ಮತ್ತು 2002-2003ರಲ್ಲಿ ಎರಡನೆಯ ಬಾರಿ ಅಧ್ಯಕ್ಷನಾಗಿ ಆಯ್ಕೆಯಾದ ತಮ್ಮ ಅಧಿಕಾರದ ಅವಧಿಯಲ್ಲಿ ಇಂಡಿಯಾ ಸೋಶಿಯಲ್ ಅಂಡ್ ಕಲ್ಚರಲ್ ಸೆಂಟರ್ ಗೆ ಕಟ್ಟಡ ನಿರ್ಮಾಣ ಮಾಡಲು ಸ್ವಂತ ಸ್ಥಳ ಮತ್ತು ಯು.ಎ.ಇ. ಸರ್ಕಾರದಿಂದ ಅನುಮತಿ ಪಡೆದ ಫಲವಾಗಿ ಪ್ರಸ್ತುತ ಭವ್ಯ ವಾಸ್ತುಶಿಲ್ಪದ ಸಭಾಂಗಣ ನಿರ್ಮಾಣವಾಗಿದೆ. ಇಲ್ಲಿ ಕನ್ನಡಿಗ ಅಧ್ಯಕ್ಷನ ಸಾಧನೆ ದಾಖಲಾಗಿದೆ.

sarvo-mix-2

7500 ಕಿಂತಲೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಅಬುಧಾಬಿ ಇಂಡಿಯನ್ ಸ್ಕೂಲಿನ ನಿರ್ದೇಶಕ ಮಂಡಳಿಯಲ್ಲಿ 1997ರಿಂದ ನಿರ್ದೇಶಕರಾಗಿ ಗೌರವಪೂರ್ವಕ ಸ್ಥಾನ ಲಭಿಸಿದೆ. ಶಾಲಾ ವಿದ್ಯಾರ್ಥಿಗಳಲ್ಲಿ ಶಿಸ್ತು, ನಾಯಕತ್ವ. ಕ್ರೀಡೆಯಲ್ಲಿ ಮತ್ತು ಶಾಲಾ ಸರ್ವಾಂಗಿಕರಣ ಅಭಿವೃದ್ದಿಯಲ್ಲಿ ಅಪಾರ ಸೇವೆ ಸಲ್ಲಿಸಿದ್ದಾರೆ. ಸ್ಪೋಟ್ರ್ಸ್ ಕಮಿಟಿಯ ಚೇರ್ಮನ್ ಆಗಿ ಸಹ ಸೇವೆ ಸಲ್ಲಿಸುತ್ತಿರುವ ಸರ್ವೋತ್ತಮ್ ಶೆಟ್ಟಿಯವರು ಅಲ್ ವತ್ ಬಾ ದಲ್ಲಿ ಶಾಲೆಯ ನೂತನ ಶಾಖೆ ನಿರ್ಮಾಣ ಮಂಡಲಿಯಲ್ಲಿ ಕಾರ್ಯನಿರ್ಹವಣೆಯ ಜವಬ್ಧಾರಿಯನ್ನು ವಹಿಸಿಕೊಂಡು ನಿರ್ಮಾಣವಾದ ಶಾಲೆ ಪ್ರಸ್ತುತ 3000 ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತಿದ್ದಾರೆ.

sarvo-mix-3

1998 ರಲ್ಲಿ “ಕರ್ನಾಟಕ ರಾಜ್ಯೋತ್ಸವ” ಪ್ರಶಸ್ತಿಯನ್ನು ಪಡೆದಿರುವ ಸರ್ವೋತ್ತಮ ಶೆಟ್ಟಿಯವರು ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾಗಿ ಅತ್ಯುತ್ತಮ ಕಾರ್ಯಕಾರಿ ಸಮಿತಿಯ ತಂಡದೊಂದಿಗೆ ಗಲ್ಪಿನಲ್ಲಿ ಕರ್ನಾಟಕದ ಕಲೆ, ಭಾಷೆ, ಸಂಸ್ಕೃತಿಯನ್ನು ವೈಭವೀಕರಿಸಿ ಕನ್ನಡಿಗರಲ್ಲಿ ಜಾಗೃತಿ ಮೂಡಿಸಿದ ಅದ್ಭುತ ಸಾಧನೆಗೆ ಸಾಕ್ಷಿಯಾಗಿದೆ. “ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ” 2004ರಲ್ಲಿ ಅದ್ಧೂರಿಯಾಗಿ ನಡೆದ ಸಮಾರಂಭಕ್ಕೆ ಅಂದಿನ ಕರ್ನಾಟಕದ ಉಪ ಮುಖ್ಯಮಂತ್ರಿ ಮಾನ್ಯ ಸಿದ್ದರಾಮಯ್ಯ ಮತ್ತು 14 ಮಂದಿ ಗಣ್ಯರ ತಂಡ ವಿವಿಧ ದೇಶಗಳಿಂದ ಬಂದು ಸಹಸ್ರಾರು ಕನ್ನಡಿಗರ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಪ್ರಥಮ ಬಾರಿಗೆ ಕನ್ನಡ ಭಾಷೆಯ ಸಮ್ಮೇಳನ ಡಿಂಡಿಮವನ್ನು ಬಾರಿಸಿದರು.

sarvo-mix-4

25 ವರ್ಷಗಳ ಯಶಸ್ವಿ ಹೆಜ್ಜೆಯೊಂದಿಗೆ ಮುನ್ನಡೆದು 2006 ರಲ್ಲಿ ನಡೆದ ಅಬುಧಾಬಿ ಕರ್ನಾಟಕ ಸಂಘದ ರಜತ ಮಹೋತ್ಸವಕ್ಕೆ ಕರ್ನಾಟಕದ 50 ವರ್ಷದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಮುಖ್ಯಮಂತ್ರಿ ಗಲ್ಫ್‍ನಾಡಿಗೆ ಬಂದ ಮಾನ್ಯ ಹೆಚ್. ಡಿ. ಕುಮಾರಸ್ವಾಮಿಯವರು ಉದ್ಘಾಟಿಸಿದ್ದು ಗಲ್ಫಿನಲಿ ನೆಲೆಸಿರುವ ಕನ್ನಡಿಗರಿಗೆ ಮರೆಯಲಾರದ ಉತ್ಸವವಾಗಿತ್ತು.

2006ರಲ್ಲಿ ರಜತ ಮಹೋತ್ಸವ ಆಚರಿಸಿದ ಸಂದರ್ಭದಲ್ಲಿ ಸರ್ವೋತ್ತಮ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಅಬುಧಾಬಿ ಕರ್ನಾಟಕ ಸಂಘ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ದೊರೆತದ್ದು ಕಿರೀಟಕ್ಕೆ ಮತ್ತೊಂದು ಗರಿ ಸೇರ್ಪಡೆಯಾಗಿದೆ.

sarvo-mix-5

ಯು. ಎ. ಇ. ತುಳು ಕೂಟ ಮತ್ತು ನಮ ತುಳುವೆರ್, ಅಬುಧಾಬಿ ತುಳು ಕೂಟ ಎಂಬ ತುಳು ಸಂಘಟನೆಗಳಲ್ಲಿ ಕಳೆದ ಮೂರುವರೆ ದಶಕಗಳಿಂದ ತಮ್ಮ ಸಂಘಟನಾ ಚತುರತೆಯಿಂದ ನಡೆಸಿಕೊಂಡು ಬರುತ್ತಿದ್ದಾರೆ. ಇವರು ಪ್ರತಿ ವರ್ಷ ನೂತನ ಕಾರ್ಯಕಾರಿ ಸಮಿತಿ ರಚಿಸಿ ಜವಬ್ದಾರಿಯನ್ನು ಹಂಚಿ ಕೊಡುತ್ತಾರೆ. ಜವಬ್ಧಾರಿ ವಹಿಸಿಕೊಂಡ ಸದಸ್ಯರು ಬಂಟರ ಸ್ನೇಹ ಮಿಲನ, ವಿಹಾರ ಕೂಟ, ಕ್ರೀಡಾ ಕೂಟದಲ್ಲಿ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ನಡೆಸಿಕೊಂಡು ತಮ್ಮ ನಾಯಕತ್ವ ಗುಣವನ್ನು ಹೆಚ್ಚಿಸಿಕೊಳ್ಳುವಲ್ಲಿ ಸರ್ವೋತ್ತಮ ಶೆಟ್ಟಿಯವರ ಪಾತ್ರ ಬಹುಮುಖ್ಯವಾಗಿರುತ್ತದೆ.

sarvo-mix-6

ಯು. ಎ. ಇ. ತುಳು ಕೂಟದಲ್ಲಿ ಕಳೆದ ಎರಡುವರೆ ದಶಕಗಳಿಂದ ತಮ್ಮನ್ನು ತೊಡಗಿಸಿಕೊಂಡು ತುಳುನಾಡಿನ ಕಲಾ ಸಂಸ್ಕೃತೀಯ, ತುಳುಪರ್ಬ, ಸ್ಥಬ್ದಚಿತ್ರಗಳ ಮೆರವಣಿಗೆ, ಕ್ರೀಡಾಕೂಟ, ನಾಟಕ, ಯಕ್ಷಗಾನದ ಪ್ರದರ್ಶನಗಳಲ್ಲಿ ಕಾರ್ಯಕಾರಿ ಸಮಿತಿಯ ಸದಸ್ಯರಿಗೆ ಉತ್ಸಾಹ ತುಂಬಿ ಯಶಸ್ವಿಯಾಗಿ ಮುನ್ನಡೆಸುವಲ್ಲಿ ಇವರ ಕೊಡುಗೆ ಅಪಾರ.

sarvo-mother-family

ಅಬುಧಾಬಿ ಕರ್ನಾಟಕ ಸಂಘದ ಆಶ್ರಯದಲ್ಲಿ ಕೂಸಮ್ಮ ಶಂಭು ಶೆಟ್ಟಿ ಸ್ಮರಣಾರ್ಥ ಮಹಿಳಾ ಮತ್ತು ಪುರುಷರ ಥ್ರೋಬಾಲ್ ಪಂದ್ಯಾಟವನ್ನು ಪ್ರಾರಂಭಿಸಿ ಹತ್ತು ಹಲವಾರು ಮಹಿಳಾ ಮತ್ತು ಪುರುಷರ ತಂಡಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಾ ಪ್ರತಿಷ್ಠಿತ ತಂಡಗಳಾಗಿ ಪೈಪೊಟಿಯಲ್ಲಿ ಚಮತ್ಕಾರಿಕಾ ಪ್ರದರ್ಶನನೀಡುವಲ್ಲಿ ಯಶಸ್ಸು ಕಂಡಿದೆ. ನೆರೆಯ ದೇಶಗಳಾದ ಕುವೈಟ್, ಮಸ್ಕತ್, ಬಹೆರಿನ್ ತಂಡಗಳೊಂದಿಗೆ ಭಾರತದಿಂದ ತಂಡ ಗಲ್ಪ್ ನಾಡಿಗೆ ಬಂದು ಭಾಗವಹಿಸಿದ್ದು ಕ್ರೀಡಾಲೋಕದಲ್ಲಿ ಸಾಕ್ಷಿಯಾಗಿದೆ. ಪ್ರಸ್ತುತ ಎಂಟು ಮಹಿಳಾ ಮತ್ತು ಪುರುಷರ ತಂಡಗಳು ಅತ್ಯಂತ ಪೈಪೋಟಿಯಲ್ಲಿ ಸ್ಪರ್ಧಿಸುವ ತಂಡಗಳಾಗಿವೆ.

????????????????????????????????????

ಸಾಧನೆಗೆ ಸಂದ ಗೌರವ, ಪುರಸ್ಕಾರಗಳು
2009ರಲ್ಲಿ ಸರ್ವೋತ್ತಮ ಶೆಟ್ಟಿಯವರ ಸಾಮಾಜಿಕ ಸೇವೆಗೆ ಪ್ರತಿಷ್ಠಿತ “ಆರ್ಯಭಟ” ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.

sarvo-rajyotsava-hon-4

ಕುವೈಟಿನಲ್ಲಿ ನಡೆದ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ರಾಷ್ಟ್ರಕವಿ ಡಾ. ಶಿವರುದ್ರಪ್ಪನವರಿಂದ “ವಿಶ್ವಮಾನ್ಯ ಪ್ರಶಸ್ತಿ” ಸ್ವೀಕಾರ, ಅಲ್ ಐನ್ ಬುರೈಮಿ ಕನ್ನಡ ಸಂಘದಿಂದ ಸನ್ಮಾನ, ಬಹೆರಿನ್ ಕನ್ನಡ ಸಂಘದಿಂದ ಸನ್ಮಾನ, ಅಬುಧಾಬಿ ಕರ್ನಾಟಕ ಸಂಘದಿಂದ ಸನ್ಮಾನ, ದುಬಾಯಿ ಕರ್ನಾಟಕ ಸಂಘದಿಂದ ಸನ್ಮಾನ, ಬೆಂಗಳೂರು ನಾರಾಯಣ ಹೃದಯಾಲಯದಲ್ಲಿ ಡಾ// ದೇವಿ ಪ್ರಸಾದ್ ಶೆಟ್ಟಿಯವರಿಂದ ಸನ್ಮಾನ, ಯು.ಎ.ಇ.ಬಂಟ್ಸ್, ಬಂಟ್ಸ್ ಥ್ರೋಬಾಲ್ ದುಬಾಯಿ, ದೆಹಲಿ ಬಂಟ್ಸ್ ಸಂಘದಿಂದ ಸನ್ಮಾನ, 1998ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮಾನ್ಯ ಮುಖ್ಯಮಂತ್ರಿ ಜೆ ಹೆಚ್. ಪಟೆಲ್ ರಿಂದ ಸ್ವೀಕಾರ, ಅಬುಧಾಬಿ ಕರ್ನಾಟಕ ಸಂಘದ “ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ” ಕರ್ನಾಟಕದ ಮಾನ್ಯ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿಯವರಿಂದ ಸ್ವೀಕಾರ. ಮುಂಬೈಯಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನದಲ್ಲಿ “ಹೃದಯವಂತರು” ಪ್ರಶಸ್ತಿ ಇತ್ಯಾದಿ ಹತ್ತು ಹಲವು ಪ್ರಶಸ್ತಿಗಳ ಸರಮಾಲೆಯನ್ನು ಧರಿಸಿರುವ ಸರ್ವೋತ್ತಮ ಶೆಟ್ಟಿಯವರ ಸಹಾಯ ಹಸ್ತ ಚಾಚುವಲ್ಲಿ ಎತ್ತಿದ ಕೈ. ಸಾಮಾಜಿಕ ಕಳಕಳಿ ಇರುವ ಇವರು ಅಪಘಾತಕ್ಕೆ ಒಳಗಾದವರಿಗೆ, ಸಂಕಷ್ಟದಲ್ಲಿ ಇರುವವರಿಗೆ, ನಿಧನರಾದವರ ಮನೆಗೆತೆರಳಿ ನೆರವು ನೀಡಿ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುತ್ತಿರುವ ನೈಜಮಾನವ.

sarvo-speech

ಸಹಸ್ರಾರು ಸಂಖ್ಯೆಯಲ್ಲಿ ತುಳುವರ, ಕನ್ನಡಿಗರ ವಿಳಾಸ, ದೂರವಾಣಿ ಸಂಖ್ಯೆ, ಇ-ಮೈಲ್ ವಿಳಾಸ ಹೊಂದಿರುವ ಇವರು ಗಲ್ಪ್ ನಾಡಿನಲ್ಲಿ ನಡೆಯುವ, ಕರ್ನಾಟಕ ಪರ ಸಂಘಟನೆಗಳ ವೈವಿಧ್ಯಮಯ ಸಾಂಸ್ಕೃತಿಕ, ಸಾಹಿತ್ಯ, ಕ್ರೀಡಾ ಕಾರ್ಯಕ್ರಮಗಳ ಮಾಹಿತಿ ನೀಡುತ್ತಾರೆ. ವೈದ್ಯಕೀಯ ಶಿಭಿರ, ರಕ್ತಧಾನ ಶಿಬಿರ, ನೌಕರಿ, ಪ್ರಕೃತಿ ವಿಕೋಪಕ್ಕೆ ತುತ್ತಾದವರಿಗೆ ಸಹಾಯ ಇತ್ಯಾದಿ ಹತ್ತು ಹಲವು ವಿಚಾರಗಳನ್ನು ಗಲ್ಪಿನಾದ್ಯಂತ ಇರುವ ಬಂಧು ಮಿತ್ರರಿಗೆ ತಿಳಿಸಿ ಪರಿಹಾರ ಕಂಡುಕೊಳ್ಳುವಲ್ಲಿ ಯಶಸ್ಸು ಕಂಡಿದ್ದಾರೆ. ಯು.ಎ.ಇ. ಯಲ್ಲಿ ನಡೆಯುವ ಹೆಚ್ಚಿನ ಎಲ್ಲಾ ಕಾರ್ಯಕ್ರಮಗಳಿಗೆ ಮುಖ್ಯ ಅತಿಥಿಯಾಗಿ ಅಹ್ವಾನಿಸಲ್ಪಡುವ ಸರ್ವೋತ್ತಮ್ ಶೆಟ್ಟಿಯವರು ಅನಿವಾಸಿ ಕನ್ನಡಿಗರು ಗೌರವಿಸಲ್ಪಡುವ ವ್ಯಕ್ತಿಯಾಗಿದ್ದಾರೆ.

sarvo-sports-hon-2

ಐತಿಹಾಸಿಕ, ಪೌರಾಣಿಕ, ಸಾಮಾಜಿಕ ನಾಟಕಗಳಲ್ಲಿ ಪ್ರಮುಖ ಪಾತ್ರಧಾರಿಯಾಗಿ, ಸಭೆ ಸಮಾರಂಭಗಳಲ್ಲಿ ಮುಖ್ಯ ಅತಿಥಿಯಾಗಿ, ತುಳು ಕನ್ನಡ, ಅಂಗ್ಲ ಭಾಷೆಯಲ್ಲಿ ಕಾರ್ಯಕ್ರಮ ನಿರೂಪಕರಾಗಿ, ಕ್ರೀಡಾಕೂಟದಲ್ಲಿ, ವಿಹಾರಕೂಟದಲ್ಲಿ ತಲೆಯ ಮೇಲೊಂದು ದೊಡ್ಡ ಹ್ಯಾಟ್ ಹಾಕಿ ಕೈಲೊಂದು ಮೈಕ್ ಹಿಡಿದು ಮಾತನಾಡಿದರೆ ಕಂಚಿನ ಕಂಠದ ಸ್ವರ ಪ್ರತಿಧ್ವನಿಸುವ ವ್ಯಕ್ತಿತ್ವದ ಸರ್ವೋತಮಣ್ಣ ಎಲ್ಲರ ಅಚ್ಚುಮಚ್ಚಿನ ಕೇಂದ್ರಬಿಂದು ಆಗಿರುತ್ತಾರೆ.

ಸದಾ ಗಣ್ಯರೊಂದಿಗೆ ಒಡನಾಟದಲ್ಲಿರುವ, ಎಲ್ಲಾ ಸಂಘಟನೆಗಳ ಮುಖ್ಯಸ್ಥರೊಂದಿಗೆ, ಸದಸ್ಯರೊಂದಿಗೆ ನಗುಮೊಗದಿಂದ ಸ್ನೇಹಜೀವಿಯಾಗಿರುವ ಸರ್ವೋತ್ತಮ ಶೆಟ್ಟಿಯವರು 1984 ರಲ್ಲಿ ಶ್ರೀಮತಿ ಉಷಾರವರನ್ನು ಬಾಳಸಂಗಾತಿಯನ್ನಾಗಿ ಮಾಡಿಕೊಂಡು, ಪುತ್ರ ಸಮರ್ಥ್, ಪುತ್ರಿ ಸಂಯುಕ್ತ ರೊಂದಿಗೆ ಸುಖೀ ಜೀವನ ನಡೆಸುತ್ತಿರುವ ಇವರು 2009ರಲ್ಲಿ ತಮ್ಮ ದಾಂಪತ್ಯ ಜೀವನದ ರಜತ ವರ್ಷಾಚರಣೆಯನ್ನು ನೂರಾರು ಆತ್ಮೀಯರೊಂದಿಗೆ ಆಚರಿಸಿದ ಸಮಾರಂಭ ಆತ್ಮೀಯ ಲೋಕವನ್ನು ಸೃಷ್ಠಿಸಿತ್ತು.

sarvo-vip-1

ಇತ್ತಿಚೆಗೆ ಪ್ರಾರಂಭವಾದ “ಪಟ್ಲ ಫೌಂಡೇಶನ್ ಟ್ರಸ್ಟ್” ಯು.ಎ.ಇ. ಘಟಕದ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

ಕರ್ನಾಟಕ ಹಾಗೂ ಭಾರತದ ವಿವಿದ ಕಡೆಗಳು ಮತ್ತು ಹಲವು ದೇಶಗಳಲ್ಲಿ ಸರ್ವೋತ್ತಮ್ ಶೆಟ್ಟಿಯವರು ಬಂಟ್ಸ್ ಸಂಘ, ತುಳು ಸಂಘ, ಕನ್ನಡ ಸಂಘಗಳಲ್ಲಿ ಮುಖ್ಯ ಅತಿಥಿಯಾಗಿ ಅಹ್ವಾನಿಸಲ್ಪಟ್ಟಿದ್ದಾರೆ ಅವುಗಳಲ್ಲಿ ಪ್ರಮುಖವಾದುದು, ಮಂಗಳೂರು, ಮುಲ್ಕಿ, ಬೆಂಗಳೂರು, ಹುಬ್ಬಳ್ಳಿ, ಬೆಳಗಾಂ, ಪುಣೆ, ಪಿಂಪ್ರಿ ಚಿಂಚವಾಡ, ನಾಸಿಕ್, ದೆಹಲಿ, ಮುಂಬೈ, ಸಾಂಗ್ಲಿ, ಒಮಾನ್, ಬಹರೈನ್, ಕತ್ತಾರ್, ಕುವೈಟ್ ನಲ್ಲಿ ತುಳು, ಕನ್ನಡ ಸಂಸ್ಕೃತಿಯ ಸಂದೇಶವನ್ನು ನೀಡಿದ್ದಾರೆ.

sarvo-with-ambassador

ಜೀವನದ ಯಶಸ್ವಿ ಹೆಜ್ಜೆಯಲ್ಲಿ ಎರಡು ಮಹಾನ್ ವ್ಯಕ್ತಿಗಳು ಇವರಿಗೆ ಮಾದರಿಯಾಗಿದ್ದಾರೆ. ಭಾರತೀಯ ಹೆಮ್ಮೆಯ ವರಪುತ್ರ ಸರಳ ಸಜ್ಜನಿಕೆಯ ಸಕಾರ ಮೂರ್ತಿ, ತುಳು ಮಣ್ಣಿನ ಮಗ ಪದ್ಮಶ್ರೀ ಪುರಸ್ಕೃತ ಡಾ// ಬಿ. ಆರ್. ಶೆಟ್ಟಿಯವರು ಮತ್ತು ಗುಲಾಮ ಗಿರಿಯಿಂದ ಮಾನವ ಕೋಟಿಯನ್ನು ಮುಕ್ತಗೊಳಿಸಿದ ವಿಶ್ವ ಮೆಚ್ಚಿದ ನಾಯಕ ನೆಲ್ಸನ್ ಮಂಡೆಲಾ.

sarvo-with-dr-dv-hegde

ಸರ್ವರಲ್ಲಿ ಉತ್ತಮ “ಸರ್ವೋತ್ತಮ” ಶೆಟ್ಟಿಯವರು, ಗಲ್ಪ್ ನಾಡಿನಲ್ಲಿ ನೆಲೆಸಿರುವ ಅಪ್ಪಟ ಅನಿವಾಸಿ ಭಾರತೀಯ, ಕನ್ನಡಿಗ, ತುಳುಮಣ್ಣಿನ ಮಗ ಜಾತಿ ಮತ ಧರ್ಮದ ಎಲ್ಲೆಯನ್ನು ಮೀರಿ ವಿಶ್ವ ಮಾನವ ತತ್ವವನ್ನು ತನ್ನಲ್ಲಿ ಅಳವಡಿಕೊಂಡಿರುವ ಸರ್ವೋತ್ತಮ ಶೆಟ್ಟಿಯವರು ಐತಿಹಾಸಿಕ ದಾಖಲೆಯಾಗಲಿರುವ “ವಿಶ್ವ ತುಳು ಅಯೊನೊ – 2016” ಅಧ್ಯಕ್ಷ ಸ್ಥಾನದಲ್ಲಿ ನಡೆಯಲಿರುವ ತುಳು ಸಮ್ಮೇಳನ ಯಶಸ್ವಿಯಾಗಲಿ ತುಳುವರು, ಕನ್ನಡಿಗರು ಮಾತ್ರವಲ್ಲದೆ, ಸಮಸ್ತ ಭಾರತೀಯರ ಪರವಾಗಿ ಕೋಟಿ ಕೋಟಿ ಅಭಿನಂದನೆಗಳು ಹಾಗೂ ವಿಶ್ವ ತುಳುವರ ಪರವಾಗಿ ಶುಭಹಾರೈಕೆಗಳು.
“ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ”

ಬಿ. ಕೆ. ಗಣೇಶ್ ರೈ
ಪೂರ್ವ ಅಧ್ಯಕ್ಷ- ಕರ್ನಾಟಕ ಸಂಘ ಶಾರ್ಜಾ
ಅರಬ್ ಸಂಯುಕ್ತ ಸಂಸ್ಥಾನ

Comments are closed.