ಕರ್ನಾಟಕ

ಪ್ರಿಯತಮೆ ಸಾವಿಗೆ ನೊಂದು ಪ್ರಿಯಕರ ಆತ್ಮಹತ್ಯೆ

Pinterest LinkedIn Tumblr

sucuideಮೈಸೂರು: ಪ್ರಿಯತಮೆ ಸಾವಿಗೆ ನೊಂದು ಯುವಕ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಬೊಮ್ಮನಹಳ್ಳಿಯಲ್ಲಿ ನಡೆದಿದೆ.

ಗ್ರಾಮದ ನಿವಾಸಿ ಮಹದೇವ ಎಂಬವರ ಪುತ್ರ ರವಿ ಆತ್ಮಹತ್ಯೆ ಮಾಡಿಕೊಂಡವ. ಹೂಟಹಳ್ಳಿ ಕೈಗಾರಿಕೆ ಪ್ರದೇಶದ ಒಂದು ಕಾರ್ಖಾನೆಯಲ್ಲಿ ರವಿ ಹಾಗೂ ಕಾವ್ಯ ಕೆಲಸ ಮಾಡುತ್ತಿದ್ದರು. ಇವರ ಪ್ರೀತಿಗೆ ಮನೆಯವರ ವಿರೋಧಿಸಿದ ಹಿನ್ನೆಲೆಯಲ್ಲಿ ಕಾವ್ಯ ರವಿಯ ಮನೆಯಲ್ಲಿ ಬಂದು ವಾಸವಾಗಿದ್ದಳು. ಆದರೆ ಕೆಲ ದಿನಗಳಿಂದ ರವಿ ಕಾವ್ಯಳ ಬಗ್ಗೆ ಅನುಮಾನಪಟ್ಟು, ಆಕೆಯನ್ನು ಮನೆಯಿಂದ ಹೊರಹಾಕಿದ್ದ. ಪ್ರಿಯಕರನಿಂದ ತಿರಸ್ಕೃತಳಾದ ಕಾವ್ಯ ಮನನೊಂದು ತನ್ನ ದೊಡ್ಡಪ್ಪನ ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಳು.

ಬಳಿಕ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರೂ, ಫಲಕಾರಿಯಾಗದೆ ಕಾವ್ಯ ಶುಕ್ರವಾರ ಮೃತಪಟ್ಟಿದ್ದಳು. ಕಾವ್ಯಳ ಸಾವಿನ ಸುದ್ದಿಯಿಂದ ಮನನೊಂದ ರವಿ, ಶನಿವಾರ ರಾತ್ರಿ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ.

ಈ ಸಂಬಂಧ ನಜರ್ ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.