ಕರ್ನಾಟಕ

ಚಿಲ್ಲರೆ ಸಮಸ್ಯೆಯಿಂದ ಬೈಕಿಗೆ ಫುಲ್ ಟ್ಯಾಂಕ್ ಪೆಟ್ರೋಲ್; ಹೊತ್ತಿ ಉರಿದ ಬಂಕ್

Pinterest LinkedIn Tumblr

bunk-petolಕಲಬುರಗಿ: ಪೆಟ್ರೋಲ್ ಹಾಕಿಸುವ ವೇಳೆ ಬೈಕ್‍ಗೆ ಬೆಂಕಿ ತಗುಲಿ ನಂತರ ಅದರ ಕೆನ್ನಾಲಿಗೆ ಬಂಕ್‍ಗೆ ವ್ಯಾಪಿಸಿದ ಘಟನೆ ಸೇಡಂ ತಾಲೂಕಿನ ಜಿಕೆ ರಸ್ತೆಯ ಬಾರುದ್ ಪೆಟ್ರೋಲ್ ಬಂಕ್‍ನಲ್ಲಿ ನಡೆದಿದೆ.

ಶುಕ್ರವಾರ ಸಂಜೆ ಬದ್ರುದ್ದೀನ್ ಎಂಬವರು ಪೆಟ್ರೋಲ್ ಹಾಕಿಸಲು ಬಂದಿದ್ದಾರೆ. ಈ ವೇಳೆ ಚಿಲ್ಲರೆ ಸಮಸ್ಯೆ ಉಂಟಾಗಿ ಫುಲ್ ಟ್ಯಾಂಕ್ ಪೆಟ್ರೋಲ್ ಹಾಕಿಸಿದ್ದಾರೆ.

ಫುಲ್ ಆಗಿ ಟ್ಯಾಂಕ್ ನಿಂದ ಪೆಟ್ರೋಲ್ ಬಿಸಿಯಾಗಿದ್ದ ಎಂಜಿನ್‍ಗೆ ಬಿದ್ದಿದೆ. ಎಂಜಿನ್‍ಗೆ ಬಿದ್ದ ಕೂಡಲೇ ಬೆಂಕಿ ಹೊತ್ತಿಕೊಂಡು ಬೈಕ್, ಮಷಿನ್ ಸಮೀಪ ಬಿದ್ದಿದೆ. ಈ ಬೆಂಕಿಯ ಕೆನ್ನಾಲಿಗೆ ಎರಡೂ ಮಷಿನ್‍ಗಳಿಗೆ ತಗುಲಿ ಬಂಕ್ ಹೊತ್ತಿಕೊಂಡಿದೆ.

ಘಟನೆಯಲ್ಲಿ ಬೈಕ್ ಸಂಪೂರ್ಣ ಸುಟ್ಟು ಭಸ್ಮವಾಗಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. ಘಟನೆಯ ನಂತರ ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಘಟನೆಯ ಬಗ್ಗೆ ಸೇಡಂ ಸಿಪಿಐ ಪಂಚಾಕ್ಷರಿ ಸಾಲಿಮಠ್ ಪ್ರತಿಕ್ರಿಯಿಸಿದ್ದು, ಬೈಕ್ ಸಂಪೂರ್ಣ ಹೊತ್ತಿಕೊಂಡಿದ್ದು, ಯಾವ ಬೈಕ್ ಎನ್ನುವುದು ತಿಳಿದು ಬಂದಿಲ್ಲ. ಬೈಕ್ ಸವಾರ ಬದ್ರುದ್ದೀನ್ ನಾಪತ್ತೆಯಾಗಿದ್ದಾರೆ. ಬಂಕ್‍ನಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಸಿಸಿಟಿವಿ ದೃಶ್ಯಾವಳಿಯನ್ನು ನೋಡಿದ ಬಳಿಕ ಮಾಹಿತಿ ನೀಡುತ್ತೇನೆ ಎಂದು ತಿಳಿಸಿದ್ದಾರೆ.

Comments are closed.