ಕರ್ನಾಟಕ

ಭಾರೀ ಟೀಕೆಯ ನಂತರ ಸಂಸತ್ ಅಧಿವೇಶನಕ್ಕೆ ಆಗಮಿಸಿದ ಮೋದಿ

Pinterest LinkedIn Tumblr

modiನವದೆಹಲಿ(ನ.23): ಕೊನೆಗೂ ಪ್ರತಿಪಕ್ಷಗಳ ಆಗ್ರಹಕ್ಕೆ ಮಣಿದ ಪ್ರಧಾನಿ ನರೇಂದ್ರಮೋದಿ ಇವತ್ತು ಲೋಕಸಭೆ ಕಲಾಪಕ್ಕೆ ಹಾಜರಾಗಿದ್ದಾರೆ.
ಕಲಾಪ ಆರಂಭವಾಗುತ್ತಿದ್ದಂತೆ, ಸದನಕ್ಕೆ ಆಗಮಿಸಿದ ಮೋದಿ, ತಮ್ಮ ಕುರ್ಚಿಯಲ್ಲಿ ಆಸೀನರಾದರು. ಈ ವೇಳೆ, ಪ್ರತಿಪಕ್ಷಗಳು ಮೋದಿ ಹೇಳಿಕೆ ನೀಡುವಂತೆ ಬಿಗಿಪಟ್ಟುಹಿಡಿದರು.
ಇದರಿಂದ, ಸದನದಲ್ಲಿ ತೀವ್ರ ಗದ್ದಲ ಉಂಟಾಯಿತು. ಸ್ಪೀಕರ್ ಸುಮಿತ್ರಾಮಹಾಜನ್, ಕಲಾಪದ ನಿಯಮ 377 ಪ್ರಕಾರ, ಬೇಕಾದಂತೆ ಮಾತನಾಡುವಂತಿಲ್ಲ. ಅವಕಾಶ ಸಿಕ್ಕಾಗ ಮಾತನಾಡಬೇಕೆಂದು ತಾಕೀತು ಮಾಡಿದರು. ಇದರಿಂದ ಗದ್ದಲ, ಕೋಲಾಹಲ ತೀವ್ರಗೊಂಡಿತು. ಹೀಗಾಗಿ, ಕಲಾಪವನ್ನು ಕೆಲಹೊತ್ತುಮುಂದೂಡಲಾಯ್ತು.

Comments are closed.