ಕರ್ನಾಟಕ

40 ಮಂದಿಯ ಪ್ರಾಣ ಉಳಿಸಿ ಪ್ರಾಣ ಬಿಟ್ಟ ಬಸ್‌ಚಾಲಕ !

Pinterest LinkedIn Tumblr

bus-driver

ತುರುವೇಕೆರೆ: ಇಲ್ಲಿ ಬಸ್‌ಚಾಲಕರೊಬ್ಬರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದು, ಹೃದಯಾಘಾತವಾಗಿ ಸಾಯುವ ಮುನ್ನ ಬಸ್ಸನ್ನು ರಸ್ತೆಬದಿ ನಿಲ್ಲಿಸಿ ಪ್ರಾಣ ಬಿಟ್ಟ ದಾರುಣ ಘಟನೆ ಭಾನುವಾರ ನಡೆದಿದೆ.

40 ಮಂದಿಯ ಪ್ರಾಣ ಉಳಿಸಿದ ಪುಣ್ಯಾತ್ಮ ಚಾಲಕನ ಹೆಸರು ಕೃಷ್ಣ. ಈತ ಬೆನಕನ ಕೆರೆಯಿಂದ ತುರುವೇಕೆರೆಗೆ ಬಸ್ ಚಲಾಯಿಸುತ್ತಿದ್ದ. ದೇವಿಹಳ್ಳಿ ಗೇಟ್ ಬಳಿ ಚಲಾಯಿಸುತ್ತಿದ್ದಾಗ ಚಾಲಕ ಕೃಷ್ಣ’ಗೆ ಹೃದಯಾಘಾತವಾಗಿದೆ. ತನ್ನ ನೋವನ್ನು ಅರಿತ ಆತ ತಕ್ಷಣ ಬಸ್ ನಿಲ್ಲಿಸಿದ್ದಾನೆ.

ನಂತರ ಕೆಲವು ಕ್ಷಣಗಳಲ್ಲಿ ಈತನ ಪ್ರಾಣ ಹೋಗಿದೆ. ತನ್ನ ಪ್ರಾಣ ಕೊಟ್ಟು ಜೀವ ತ್ಯಾಗ ಮಾಡಿದ ಚಾಲಕನಿಗೆ ಬಸ್’ನಲ್ಲಿದ ಪ್ರಯಾಣಿಕರು ಕಂಬಿನಿ ಮಿಡಿದರು.

Comments are closed.