ಬೆಳಗಾವಿ: ಎಂಇಎಸ್ ನಡೆಸಿದ ಕರಾಳ ದಿನದ ಆಚರಣೆಯ ವೇಳೆ ಕುದುರೆ ಮೇಲೆ ಕುಳಿತು, ಬಂದೂಕು ಪ್ರದರ್ಶಿಸಿದ್ದ ರತ್ನಪ್ರಸಾದ್ ಪವಾರ್ ಎಂಬಾತನನ್ನು ಬೆಳಗಾವಿ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಸದ್ಯದಲ್ಲೇ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಚವಾಟ ಗಲ್ಲಿಯ ರತ್ನಪ್ರಸಾದ್ ಪವಾರ್ ಕರಾಳ ದಿನಾಚರಣೆಯ ಮೆರವಣಿಗೆಯಲ್ಲಿ ಬಂದೂಕು ಪ್ರದರ್ಶಿಸಿದ್ದ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಮೂವರನ್ನು ಬಂಧಿಸಲಾಗುವುದು ಎಂದು ಡಿಸಿಪಿ ಜಿ. ರಾಧಿಕಾ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.
Comments are closed.