ಬೆಂಗಳೂರು: ತಮ್ಮ ಮನೆಯನ್ನು ಸಾಂಕೇತಿಕವಾಗಿ ವಶಕ್ಕೆ ಪಡೆದಿರುವ ಬೆಂಗಳೂರು ನಗರ ಜಿಲ್ಲಾಡಳಿತದ ವಿರುದ್ಧ ನಟ ದರ್ಶನ್ ಅವರು ಸೋಮವಾರ ಹೈಕೋರ್ಟ್ ಮೆಟ್ಟಿಲೇರಿದ್ದಾರೆ,
ಕಳೆದ ಶನಿವಾರ ದರ್ಶನ್ ಮನೆಯ ಗೋಡೆಯ ಮೇಲೆ ‘ಇದು ಕರ್ನಾಟಕ ಸರ್ಕಾರದ ಸ್ವತ್ತು’ ಎಂದು ಜಿಲ್ಲಾಡಳಿತ ಬರೆದಿತ್ತು. ಜಿಲ್ಲಾಡಳಿತದ ಈ ಕ್ರಮವನ್ನು ಪ್ರಶ್ನಿಸಿ ದರ್ಶನ್ ಅವರು ಇಂದು ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದು, ಅರ್ಜಿ ನಾಳೆ ವಿಚಾರಣೆಗೆ ಬರಲಿದೆ.
ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್ಸ್ ಬಡಾವಣೆಯಲ್ಲಿರುವ ದರ್ಶನ್ ಅವರ ಮನೆಯೂ ಸೇರಿದಂತೆ ಒಟ್ಟು ಎಂಟು ಮನೆಗಳನ್ನು ಜಿಲ್ಲಾಡಳಿತ ಶನಿವಾರ ವಶಪಡಿಸಿಕೊಂಡಿದೆ.
ಕರ್ನಾಟಕ
Comments are closed.