ಕರ್ನಾಟಕ

ಮುಖ್ಯಮಂತ್ರಿಯ ಹೊಟ್ಟೆ ತುಂಬಿದರೆ ಸಾಕು: ವಿಶ್ವನಾಥ್

Pinterest LinkedIn Tumblr

vishwanthಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹೊಟ್ಟೆ ತುಂಬಿದೆ. ಅವರಿಗೆ ಹಸಿವಿನಿಂದ ಬಳಲುತ್ತಿರುವವರು ಕಾಣುತ್ತಿಲ್ಲ ಎಂದು ಮಾಜಿ ಸಂಸದ ಎಚ್.ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಾವುದೇ ಸ್ಥಳದಲ್ಲಿ ಜನತೆಯ ದೂರುಗಳನ್ನು ಸ್ವೀಕರಿಸುವವನು ನಿಜವಾದ ನಾಯಕ. ಆದರೆ, ಸಿದ್ದರಾಮಯ್ಯನವರಿಗೆ ನಾಯಕನ ಬದ್ಧತೆ ಕಾಣುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಹಿರಿಯ ಮುಖಂಡ ಸಿ.ಎಂ.ಇಬ್ರಾಹಿಂ ರಾಜ್ಯ ಅಭಿವೃದ್ಧಿಯಲ್ಲಿ ಹಿಂದುಳಿದಿದೆ ಎನ್ನುವ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅದರಂತೆ ವರ್ತಿಸುತ್ತಿದ್ದಾರೆ ಎಂದರು.

ತೃಪ್ತಿಯಿಂದ ಇರುವವರಿಗೆ ಅತೃಪ್ತಿಯಿರುವವರ ನೋವು ಅರ್ಥವಾಗುವುದಿಲ್ಲ. ತೃಪ್ತಿಯಿಂದ ಇರುವವರು ಅತೃಪ್ತಿ ಇದ್ದವರ ಮನಸ್ಸನ್ನು ಅರಿಯಲು ಪ್ರಯತ್ನಿಸಬೇಕು ಎಂದು ಹಿರಿಯ ಕಾಂಗ್ರೆಸ್ ಮುಖಂಡ ಮಾಜಿ ಸಂಸದ ಎಚ್.ವಿಶ್ವನಾಥ್ ಸಲಹೆ ನೀಡಿದ್ದಾರೆ.

Comments are closed.