ಕರ್ನಾಟಕ

ಜಯಲಲಿತಾರ ಆರೋಗ್ಯ ಸುಧಾರಿಸಲಿ ಎಂದು ಮೈಸೂರಿನಲ್ಲಿ ಪ್ರಾರ್ಥನೆ ! ಪ್ರಾರ್ಥನೆ ಮಾಡಿವರು ಯಾರು ಗೊತ್ತಾ..?

Pinterest LinkedIn Tumblr

jaya2

ಮೈಸೂರು: ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರ ಆರೋಗ್ಯ ಸುಧಾರಿಸಲಿ ಎಂದು ಮೈಸೂರಿನಿಂದ 35 ಕೀ.ಮೀ ದೂರದ ಗ್ರಾಮದಲ್ಲಿರುವ ಮಲ ಸೋದರ ಎನ್‌.ಜೆ. ವಾಸುದೇವನ್‌ಪ್ರಾರ್ಥಿಸಿದ್ದಾರೆ.

‘ಚಾಮುಂಡೇಶ್ವರಿ ದೇವಿ ನನ್ನ ಸೋದರಿಗೆ ಉತ್ತಮ ಆರೋಗ್ಯವನ್ನು ಕರುಣಿಸುವಂತೆ ಪ್ರಾರ್ಥಿಸುತ್ತಿದ್ದೇನೆ,’ ಎಂದು ಎಂಬತ್ತು ವರ್ಷದ ವಾಸುದೇವನ್‌ಹೇಳಿದ್ದಾರೆ.

ಒಂದು ಕಾಲದಲ್ಲಿ ಜಮೀನ್ದಾರರಾಗಿದ್ದ ಅವರು ಬಳಿಕ ಸಂಕಷ್ಟದ ಜೀವನ ನಡೆಸುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ಪತ್ನಿ ಮತ್ತು ಏಕಮಾತ್ರ ಪುತ್ರನನ್ನು ಕಳೆದುಕೊಂಡಿರುವ ಅವರು ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ.

ತಾನು ಸಾಯುವ ಮೊದಲು ಜಯಲಲಿತಾ ಅವರನ್ನು ಒಮ್ಮೆ ಭೇಟಿಯಾಗಬೇಕು ಎಂಬ ಬಯಕೆ ಇದೆ ಎಂದು ಅವರು ಹೇಳಿದ್ದಾರೆ. ಅದೇ ರೀತಿ ತಂದೆ ಜಯರಾಮ ಅವರು ತನ್ನ ತಾಯಿಯನ್ನು ತೊರೆದು ಜಯಲಲಿತಾ ಅವರ ತಾಯಿ ಸಂಧ್ಯಾ ಅವರನ್ನು ಮದುವೆಯಾದ ಸಂದರ್ಭವನ್ನು ಕೂಡ ಅವರು ನೆನೆಸಿಕೊಳ್ಳುತ್ತಾರೆ.

ಜಯಲಲಿತಾ ಅವರ ಸಂಬಂಧಿ ವಯಸ್ಸಾಗಿದ್ದ ಮಹಿಳೆಯೊಬ್ಬರು ಮೇಲುಕೋಟೆಯಲ್ಲಿ ವಾಸವಿದ್ದರು. ಅವರು ಮೃತಪಟ್ಟ ಬಳಿಕ ಮನೆಯನ್ನು ಮಾರಿದ್ದು, ಕೆಡವಲಾಗಿದೆ ಎಂದು ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ದೇಗುಲದ ಅರ್ಚಕ ಸಂತಾನಂ ಹೇಳಿದ್ದಾರೆ.

Comments are closed.