ಕರ್ನಾಟಕ

ನೇರಳೆ ಹಣ್ಣು ಕ್ಯಾನ್ಸರನ್ನು ತಡೆಗಟ್ಟಬಲ್ಲಂತಹ ರೋಗ ನಿರೋಧಕ ಶಕ್ತಿಯಾಗಿದೆ.

Pinterest LinkedIn Tumblr

ಇತ್ತೀಚಿನ ಸಂಶೋಧನೆಗಳ ಪ್ರಕಾರ, ನೇರಳೆ ಹಣ್ಣಿನಲ್ಲಿ ಕ್ಯಾನ್ಸರನ್ನು ತಡೆಗಟ್ಟಬಲ್ಲ ಅಂಶಗಳು ಹೇರಳವಾಗಿವೆಯಂತೆ.
ಮಧುಮೇಹಕ್ಕೆ ನೇರಳೆಹಣ್ಣು ರಾಮಬಾಣ. ಪಾರಂಪರಿಕ ವೈದ್ಯರು ಹಣ್ಣು ಹಾಗೂ ಬೀಜಗಳನ್ನು ಡಯಾಬಿಟಿಸ್ನ ಚಿಕಿತ್ಸೆಯಲ್ಲಿ ಬಳಸುತ್ತಾರೆ. ಇದರ ಬೀಜಗಳಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಶೇ.30ರಷ್ಟು ಕಡಿಮೆಗೊಳಿಸಬಹುದು.

ಖನಿಜಾಂಶಗಳಾದ ಕ್ಯಾಲ್ಸಿಯಂ, ಪೊಟ್ಯಾಷಿಯಂ, ಕಬ್ಬಿಣ ಹಾಗೂ ‘ಸಿ’ ಜೀವಸತ್ವಗಳು ಸಮೃದ್ಧವಾಗಿರುತ್ತವೆ. ಇದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಮೂಳೆಗಳೂ ಬಲಿಷ್ಠಗೊಳ್ಳುತ್ತವೆ.

ನೇರಳೆಯಲ್ಲಿ ಶಕ್ತಿಶಾಲಿ ಆಯಂಟಿಆಕ್ಸಿಡೆಂಟ್ಸ್ ಇರುವುದರಿಂದ ಹೃದ್ರೋಗ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಬಹುದು.ನೇರಳೆ ಗಿಡದ ಎಲೆಗಳನ್ನು ಆಯುರ್ವೇದ ಪದ್ಧತಿಯಲ್ಲಿ ಅತಿಸಾರ ಭೇದಿ ಹಾಗೂ ಬಾಯಿಹುಣ್ಣುಗಳಿಗೆ ಔಷಧಿಯಾಗಿ ಬಳಸುತ್ತಾರೆ. ಬ್ಯಾಕ್ಟೀರಿಯಾ ವಿರುದ್ಧ ಹೋರಾಡಬಲ್ಲ ಗುಣವಿರುವುದರಿಂದ ಬಾಯಿಯ ಆರೋಗ್ಯ ರಕ್ಷಣೆಗೆ ಉಪಯುಕ್ತ.

ನೇರಳೆ ಎಲೆ, ತೊಗಟೆ, ಬೀಜಗಳನ್ನು ಬ್ಯಾಕ್ಟೀರಿಯಾಗಳಿಂದ ಹರಡುವ ಸೋಂಕುಗಳ ನಿವಾರಣೆಗೆ ಬಳಸಲಾಗುತ್ತದೆ. ಇದರಲ್ಲಿ ಮ್ಯಾಲಿಕ್ ಆಮ್ಲ, ಗ್ಯಾಲಿಕ್ ಆಮ್ಲ, ಆಕ್ಸಾಲಿಕ್ ಆಮ್ಲ ಮತ್ತು ಟ್ಯಾನಿನ್ ಇರುವುದರಿಂದ ಅವುಗಳ ಸತ್ವ ಹಣ್ಣಿಗೂ ವರ್ಗಾವಣೆಯಾಗುವ ಮೂಲಕ ಮಲೇರಿಯಾ, ಬ್ಯಾಕ್ಟೀರಿಯಾಗಳಿಂದಾದ ರೋಗಗಳು, ಉದರ ಸಂಬಂಧಿ ತೊಂದರೆಗಳು ನಿವಾರಣೆಯಾಗುತ್ತವೆ.

ನೇರಳೆಹಣ್ಣಿನ ರಸ ಸೇವನೆಯಿಂದ ಮಕ್ಕಳಲ್ಲಿ ಭೇದಿ ನಿಲ್ಲುತ್ತದೆ. ಈ ಹಣ್ಣಿನ ಪಾನಕಕ್ಕೆ ಜೇನುತುಪ್ಪ ಬೆರೆಸಿ ಸೇವಿಸುವುದರಿಂದ ಮೂಲವ್ಯಾಧಿ ಹಾಗೂ ಕಣ್ಣುರಿ ನಿಲ್ಲುತ್ತದೆ. ಅಲ್ಲದೆ, ಸುಖನಿದ್ರೆಯೂ ಪ್ರಾಪ್ತಿ.

ಈ ಹಣ್ಣಿನ ಸೇವನೆಯಿಂದ ದೇಹದ ಉಷ್ಣತೆ ಕಡಿಮೆಯಾಗುತ್ತದೆ. ನೇರಳೆ ಎಲೆಗಳನ್ನು ಜಗಿಯುವುದರಿಂದ ಬಾಯಿಯ ದುರ್ಗಂಧ ನಿರ್ಮೂಲನೆ ಆಗುತ್ತದೆ. ಹಲ್ಲುಗಳು ಗಟ್ಟಿಗೊಳ್ಳುತ್ತವೆ. ನೇರಳೆಯ ಎಲೆಗಳನ್ನು ಅರೆದು ಸುಟ್ಟ ಗಾಯಗಳಿಗೆ ಹಚ್ಚುತ್ತಾ ಬಂದರೆ ಗಾಯಗಳು ಗುಣವಾಗುತ್ತವೆ. ದೇಹದಲ್ಲಿ ಹೆಚ್ಚು ಪಿತ್ತ ಉತ್ಪತ್ತಿ ಆಗಿ, ವಾಂತಿ- ತಲೆನೋವು ಬರುತ್ತಿದ್ದರೆ ನೇರಳೆಹಣ್ಣನ್ನು ಉಪ್ಪು ಮತ್ತು ಕಾಳುಮೆಣಸಿನ ಪುಡಿಯೊಂದಿಗೆ ಸೇವಿಸುವುದು ಉತ್ತಮ.

Comments are closed.