ಕರ್ನಾಟಕ

ಕಟ್ಟಪ್ಪ ಕಾಣೆ….!

Pinterest LinkedIn Tumblr

kattappa

ಚೆನ್ನೈ: ಬಾಹುಬಲಿ ಮೊದಲ ಚಿತ್ರ ನೋಡಿದೋರೆಲ್ಲ, ಕಟ್ಟಪ್ಪ ಬಾಹುಬಲಿಯನ್ನ ಯಾಕೆ ಕೊಂದ ಎನ್ನುವ ಪ್ರಶ್ನೆಗೆ ಉತ್ತರದ ನಿರೀಕ್ಷೆಯಲ್ಲಿದ್ದಾರೆ. ಆದ್ರೆ ಇದೀಗ ತಮಿಳಿನಲ್ಲಿ ಕಟ್ಟಪ್ಪ ಕಾಣೆಯಾಗಿದ್ದಾರೆ.

ಶಾಕ್ ಆಗ್ಬೇಡಿ. ಕಟ್ಟಪ್ಪ ಎಂದಾಕ್ಷಣ ಸಿನಿ ಪ್ರೇಕ್ಷಕರಿಗೆ ನೆನಪಾಗೋದು ಬಾಹುಬಲಿಯ ಕಟ್ಟಪ್ಪ ಅಥವಾ ಆ ಪಾತ್ರ ಮಾಡಿದ ಸತ್ಯರಾಜು. ಬಾಹುಬಲಿ ದಿ ಬಿಗಿನಿಂಗ್ ಚಿತ್ರದಿಂದ ಕಟ್ಟಪ್ಪ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಇದನ್ನೇ ಎನ್‍ಕ್ಯಾಶ್ ಮಾಡಿಕೊಂಡಿರುವ ತಮಿಳಿನ ನಿರ್ದೇಶಕ ಮಣಿ ಸಿಯನ್ “ಕಟ್ಟಪ್ಪ ಕಾಣುಮ್” ಎಂಬ ಶೀರ್ಷೆಕೆಯಲ್ಲಿ ಚಿತ್ರವೊಂದನ್ನ ತೆರೆಗೆ ತರುತ್ತಿದ್ದಾರೆ.

ವಿಶೇಷವೆಂದರೆ ಈ ಚಿತ್ರದಲ್ಲಿ ಸತ್ಯರಾಜ್ ಪುತ್ರ ಸಿಬಿರಾಜ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆದ್ರೆ ಈ ಕಟ್ಟಪ್ಪ ಹೆಸರನ್ನು ಬಳಸಿಕೊಂಡಿರುವುದಕ್ಕೆ ಬಾಹುಬಲಿ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Comments are closed.