ಬೆಂಗಳೂರು: ಕನಸುಗಾರನ ಕನಸಿನ ಅಪೂರ್ವ ಚಿತ್ರಕ್ಕೆ ನಿರ್ದೇಶಕ ಯೋಗರಾಜ್ ಭಟ್ ಬಹಿರಂಗ ಪತ್ರದ ಮೂಲಕ ತಮ್ಮ ಅಭಿಪ್ರಾಯವನ್ನು ಕೊಟ್ಟಿದ್ದಾರೆ.
ಅಪೂರ್ವ ಒಂದು ಅಪರೂಪದ ಚಿತ್ರ, ರವಿಚಂದ್ರನ್ ಒಂದು ಅಸಾಧಾರಣ ಚೇತನ. ಎರಡೂ ಬೇರೆ ಬೇರೆ ದಯವಿಟ್ಟು ಮಿಕ್ಸ್ ಮಾಡಬೇಡಿ ಎಂದು ತಮ್ಮ ಪತ್ರದ ಮೂಲಕ ವಿನಂತಿಸಿಕೊಂಡಿದ್ದಾರೆ.
“ಕನ್ನಡಕ್ಕೆ ಅಂಥವರೊಬ್ಬರು ಇಲ್ಲದೆ ಇದ್ದರೆ ಚಿತ್ರರಂಗದ 20-30 ವರ್ಷಗಳ ಹಿಂದೆ ಯಾವುದೇ “ಕ್ರೇಜಿ” ಕನಸು ಹುಟ್ಟುತ್ತಲೇ ಇರಲಿಲ್ಲ. ಅವರು ಕನಸುಗಾರನಷ್ಟೇ ಅಲ್ಲ. ಕೆಲಸಗಾರ ಕೂಡ. ಎಂದೋ ರಾಜ್ಯಬಿಟ್ಟು ಅನ್ಯಭಾಷೆ ಹೋಗುವ ಚಾನ್ಸ್ ಸಿಕ್ಕರೂ ಹೋಗದೇ “ಕನ್ನಡದಲ್ಲಿ ಇರುತ್ತೀನಿ” ಎಂದು ಪಟ್ಟು ಹಿಡಿದು ಗುದ್ದಾಡಿದ ಮಹನೀಯ ಆತ ಎಂಬುದು ಎಲ್ಲರಿಗೂ ಗೊತ್ತಿದೆ” ಎಂದು ಯೋಗರಾಜ್ ಭಟ್ ಪತ್ರದಲ್ಲಿ ಕ್ರೇಜಿಸ್ಟಾರ್ ಅವರನ್ನು ಟೀಕಿಸಿದವರಿಗೆ ಉತ್ತರ ನೀಡಿದ್ದಾರೆ.
ಯೋಗರಾಜ್ ಭಟ್ ಬರೆದ ಪತ್ರವನ್ನು ಸಿನಿ ಪತ್ರಕರ್ತ ಜೋಗಿ ಅವರು ತಮ್ಮ ಫೇಸ್ ಬುಕ್ನಲ್ಲಿ ಅಪ್ಲೋಡ್ ಮಾಡಿದ್ದಾರೆ.
Comments are closed.