ನವದೆಹಲಿ: ರಾಮ್ಗೋಪಾಲ್ ವರ್ಮಾ ಅವರ ನೂತನ ಹಿಂದಿ ಚಲನಚಿತ್ರ ‘ವೀರಪ್ಪನ್’ಗೆ ಸೆನ್ಸಾರ್ ಮಂಡಳಿ ಕತ್ತರಿ ಪ್ರಯೋಗಿಸಿದೆ. ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ವರ್ಮಾ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಗೆ ಸಂಬಂಧಿಸಿದ ಸಂಭಾಷಣೆಯೊಂದಕ್ಕೆ ಕತ್ತರಿ ಹಾಕಲು ಸೆನ್ಸಾರ್ ಮಂಡಳಿ ಒತ್ತಾಯಿಸಿದೆ ಎಂದಿದ್ದಾರೆ.
ಪ್ರಸ್ತುತ ಚಿತ್ರಕ್ಕೆ ಸೆನ್ಸಾರ್ ಎ ಸರ್ಟಿಫಿಕೇಟ್ ನೀಡಿದೆ. ರಾಜೀವ್ ಗಾಂಧಿಯನ್ನು ಹತ್ಯೆ ಮಾಡಿದ್ದು ಎಲ್ಟಿಟಿಇ ನೇತಾರ ವೇಲುಪ್ಪಿಳ್ಳ ಪ್ರಭಾಕರ್ ಎಂದು ವೀರಪ್ಪನ್ ಪಾತ್ರಧಾರಿಯಾದ ಸಂದೀಪ್ ಭಾರದ್ವಾಜ್ ಹೇಳುವ ಸಂಭಾಷಣೆಗೆ ಕತ್ತರಿ ಹಾಕುವಂತೆ ಸೆನ್ಸಾರ್ ಹೇಳಿದೆ.
Comments are closed.