ಬೆಂಗಳೂರು : ಲಂಚ ಪಡೆದ ಆರೋಪ ಹೊತ್ತು ತನಿಖೆ ಎದುರಿಸುತ್ತಿರುವ ಸಿಐಡಿ ಎಸ್ಪಿ ಮಧುರವೀಣಾ ಅವರನ್ನು ರಾಜ್ಯ ಸರ್ಕಾರ ರಾಜ್ಯ ಗುಪ್ತದಳದಎಸ್ಪಿಯಾಗಿ ವರ್ಗಾವಣೆ ಮಾಡಿ ಮಂಗಳವಾರ ಆದೇಶ ನೀಡಿದೆ.
ಮಧುರವೀಣಾ ಅವರು ಬೆಂಗಳೂರಿನ ಹೊಟೇಲ್ ಒಂದರ ಮೇಲೇ ದಾಳಿ ನಡೆಸಿದ್ದ ವೇಳೆ ವೇಶ್ಯಾವಾಟಿಕೆ ಆರೋಪ ಹೊರಿಸಿ ಲಂಚ ಪಡೆದಿರುವ ಆರೋಪ ಎದುರಿಸುತ್ತಿದ್ದಾರೆ.
ಮಧುರವೀಣಾ ಅವರ ಮೇಲಿರುವ ಆರೋಪದ ಕುರಿತಾಗಿ ತನಿಖೆಗಾಗಿ ಸಿಐಡಿ ಆಂತರಿಕ ಭದ್ರತಾ ದಳದ ಐಜಿಪಿ ಮಾಲಿನಿ ಕೃಷ್ಣಮೂರ್ತಿ ಅವರ ನೇತ್ರತ್ವದಲ್ಲಿ ವಿಶೇಷತಂಡ ರಚಿಸಿದೆ.
-ಉದಯವಾಣಿ
Comments are closed.