ಕರ್ನಾಟಕ

`ಮತ್ತೆ ಬಂದ ವೀರಪ್ಪನ್’ ! ವೀರಪ್ಪನ್ ದೆವ್ವ ಮೈಮೇಲೆ ಬಂದಿದ್ದು ಸತ್ಯ ಎಂದ ನಿರ್ಮಾಪಕ ಹಾಗೂ ನಟ ಅಣ್ಣಪ್ಪ

Pinterest LinkedIn Tumblr

veerappan

ನರಹಂತಕ ಹಾಗೂ ಕಾಡುಗಳ್ಳ ವೀರಪ್ಪನ್ ಚಿತ್ರ ರಂಗಕ್ಕೆ ಮತ್ತೆ ಬಂದಿದ್ದಾನೆ. ಈ ಬಾರಿ ಆತನನ್ನು ತೆರೆಗೆ ತಂದಿರುವವರು ನಿರ್ದೇಶಕ ಪುರುಷೋತ್ತಮ್. `ಮತ್ತೆ ಬಂದ ವೀರಪ್ಪನ್’ ಚಿತ್ರಕ್ಕೆ ಬಂಡವಾಳ ಹಾಕಿ ವೀರಪ್ಪನ್ ಪಾತ್ರದಲ್ಲಿ ನಿರ್ಮಾಪಕ ಹೆಚ್.ವಿ. ಅಣ್ಣಪ್ಪ ಕಾಣಿಸಿಕೊಂಡಿದ್ದಾರೆ.

ರಾಜ್ ಭಾಸ್ಕರ್ ಸಂಗೀತ, ರೇಷ್ಮಾ, ಸಪ್ನಾ, ಗಣೇಶ್ ರಾವ್ ಕೇಸರ್‌ಕರ್ ಸೇರಿದಂತೆ ಅನೇಕರ ತಾರಾಬಳಗವಿದೆ. ಕಳೆದ ವಾರ ಚಿತ್ರದ ಧ್ವನಿಸುರುಳಿಯನ್ನು ಹಿರಿಯ ಪತ್ರಿಕಾ ಛಾಯಾಗ್ರಾಹಕ ಕೆ.ಎನ್. ನಾಗೇಶ್ ಕುಮಾರ್ ಅವರಿಂದ ಚಿತ್ರತಂಡ ಬಿಡುಗಡೆ ಮಾಡಿಸಿತು. ಧ್ವನಿಸುರುಳಿ ಬಿಡುಗಡೆ ಮಾಡಿದ ನಾಗೇಶ್ ಕುಮಾರ್ ಚಿತ್ರ ತಂಡಕ್ಕೆ ಒಳ್ಳೆಯದಾಗಲಿ ಎಂದು ಹರಸಿದರು.

ನಿರ್ಮಾಪಕ ಹಾಗೂ ನಟ ಅಣ್ಣಪ್ಪ, ವೀರಪ್ಪನ್ ದೆವ್ವ ಮೈಮೇಲೆ ಬಂದಿದ್ದು ಸತ್ಯ. ಇದರಲ್ಲಿ ಯಾವುದೇ ಗಿಮಿಕ್ ಇಲ್ಲ. ಚಿತ್ರೀಕರಣ ನಡೆಸುವ ಸಂದರ್ಭದಲ್ಲಿ ಇಡೀ ಚಿತ್ರತಂಡವನ್ನು ಹೊಡೆದೆ ಅದರ ಚಿತ್ರೀಕರಣ ನೋಡಿದ ಮೇಲೆ ನನಗೆ ಅದರ ಅರಿವಾಯಿತು. ಮೈಮೇಲೆ ದೆವ್ವ ಬಂದಿದ್ದರಿಂದಲೇ ಹೀಗೆಲ್ಲಾ ಆಯಿತು. ಅದಾದ ಬಳಿಕ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿ ಶಾಂತಿ ಹೋಮ ಮಾಡಿದ್ದಾಗಿ ಹೇಳಿಕೊಂಡರು.

ಮತ್ತೆ ಬಂದ ವೀರಪ್ಪನ್ ಚಿತ್ರವನ್ನು ಕನ್ನಡ, ಹಿಂದಿ, ತಮಿಳು, ತೆಲುಗು, ಮಲೆಯಾಳಂ ಸೇರಿದಂತೆ 5 ಭಾಷೆಗಳನ್ನು ಚಿತ್ರ ಬಿಡುಗಡೆ ಮಾಡಲಾಗುವುದು. ಎಲ್ಲಾ ಭಾಷೆಯಲ್ಲೂ ಚಿತ್ರದ ಧ್ವನಿಸುರುಳಿ ಬಿಡುಗಡೆ ಮಾಡಲಾಗುವುದು. ಚಿತ್ರ ಚೆನ್ನಾಗಿ ಬಂದಿದೆ. ಮುಂದಿನ ತಿಂಗಳು ಬಿಡುಗಡೆ ಮಾಡುವ ಉದ್ದೇಶವಿದೆ, ಸಹಕಾರ ಇರಲಿ ಎಂದರು.

ನಿರ್ದೇಶಕ ಪುರುಷೋತ್ತಮ್ ಚಿತ್ರೀಕರಣ ಸಂಪೂರ್ಣ ಮುಗಿದಿದೆ. ಕಲಾವಿದರು ತುಂಬಾ ಸಹಕಾರ ನೀಡಿದ್ದಾರೆ. ಹಾಗೆ ನಿರ್ಮಾಪಕರೂ ಕೂಡ. ಚಿತ್ರತಂಡಕ್ಕೆ ಎಲ್ಲರ ಸಹಕಾರ ಬೆಂಬಲ ಬೇಕು ಎಂದು ಹೇಳಿಕೊಂಡರು.

ನಟಿಯರಾದ ರೇಷ್ಮಾ, ಸಪ್ನಾ ಪಾತ್ರದ ಬಗ್ಗೆ ವಿವರ ನೀಡಿದರು. ರಾಜ್ ಭಾಸ್ಕರ್ ಸಂಗೀತ ಚಿತ್ರಕ್ಕಿದ್ದು, 5 ಹಾಡುಗಳಿವೆ ಎಂದರು. ಹಿರಿಯ ಕಲಾವಿದ ಗಣೇಶ್ ರಾವ್ ಕೇಸರ್‌ಸರ್ ಪಾತ್ರದ ಬಗ್ಗೆ ಮಾಹಿತಿ ನೀಡಿ ಒಳ್ಳೆಯ ಚಿತ್ರವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

Comments are closed.