ಬೆಂಗಳೂರು : ಕೇರಳ ವಿಧಾನಸಭಾ ಚುನಾವಣೆಯಲ್ಲಿ ಜಾತ್ಯಾತೀತ ಜನತಾದಳ ಸ್ಪರ್ಧಿಸಿದ 5 ಸ್ಥಾನಗಳ ಪೈಕಿ 3ರಲ್ಲಿ ಗೆಲುವು ಸಾಧಿಸಿ ಸಂಭ್ರಮಿಸಿದೆ.
ಎಡರಂಗ ಮೈತ್ರಿಕೂಟದಲ್ಲಿ ಕಣಕ್ಕಿಳಿದಿದ್ದ ಐವರು ಅಭ್ಯರ್ಥಿಗಳ ಪೈಕಿ ಮೂವರು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಚಿಟೂರಿನಲ್ಲಿ ಕೃಷ್ಣನ್ ಕುಟ್ಟಿ ,ವಡಕ್ಕರ್ನಲ್ಲಿ ಸಿ.ಕೆ.ನಾಣು ಮತ್ತು ತಿರುವಲ್ಲಾದಲ್ಲಿ ಮ್ಯಾಥ್ಯೂ ಟಿ ಥಾಮಸ್ ಅವರು ಗೆಲುವು ಸಾಧಿಸಿದ್ದಾರೆ.
ಜೆಡಿಎಸ್ ಅಭ್ಯರ್ಥಿಗಳು ಮತ್ತು ಎಡರಂಗದ ಪರವಾಗಿ ಮಾಜಿ ಪ್ರಧಾನಿ ದೇವೇಗೌಡ ಅವರು ಒಂದು ವಾರಗಳ ಕಾಲ ಬಿರುಸಿನ ಪ್ರಚಾರ ನಡೆಸಿದ್ದರು.
ಜೆಡಿಎಸ್ ಅಭ್ಯರ್ಥಿಗಳ ಆಯ್ಕೆಗೆ ಸಂಭ್ರಮ ವ್ಯಕ್ತ ಪಡಿಸಿರುವ ದೇವೇಗೌಡರು ಎಡರಂಗದ ನಾಯಕ ಮಾಜಿ ಮುಖ್ಯಮಂತ್ರಿ ಅಚ್ಯುತಾನಂದನ್ ಅವರಿಗೆ ಅಭಿನಂದನೆ ಸಲ್ಲಿಸಿ ಪತ್ರ ಬರೆದಿದ್ದಾರೆ.
-ಉದಯವಾಣಿ
Comments are closed.