ಕರ್ನಾಟಕ

ಕಳಸಾ ಬಂಡೂರಿ ವಿವಾದ ಮಧ್ಯಸ್ಥಿಕೆಗೆ ಸಿದ್ಧ: ಮೇಧಾಪಾಟ್ಕರ್

Pinterest LinkedIn Tumblr

medha

ಬೆಳಗಾವಿ: ಕಳಸಾ ಬಂಡೂರಿ ವಿವಾದ ಬಗೆಹರಿಸಿಕೊಳ್ಳಲು ಮಧ್ಯಸ್ಥಿಕೆ ವಹಿಸಿಕೊಳ್ಳಲು ಸಿದ್ಧ ಎಂದು ಸಾಮಾಜಿಕ ಕಾರ್ಯಕರ್ತೆ ಮೇಧಾಪಾಟ್ಕರ್ ಹೇಳಿದರು.

ಭಾನುವಾರ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಈ ವಿವಾದವನ್ನು ಚರ್ಚಿಸಿ ಬಗೆಹರಿಸಿಕೊಳ್ಳಲು ಅವಕಾಶವಿದೆ. ಆದರೆ, ಮಧ್ಯಸ್ಥಿಕೆಯನ್ನು ವಹಿಸಲು ಯಾರೂ ತಮ್ಮನ್ನು ಕರೆಯಲು ಮುಂದಾಗುತ್ತಿಲ್ಲ ಎಂದರು.

ಸಣ್ಣ ಸಣ್ಣ ಜಲಮೂಲಗಳು ಹಾಗೂ ಅಚ್ಚುಕಟ್ಟು ಪ್ರದೇಶಗಳನ್ನು ರಕ್ಷಿಸಿಕೊಳ್ಳಬೇಕು. ಆಗ ನೀರಿಗೆ ತೊಂದರೆ ಇರುವುದಿಲ್ಲ ಎಂದು ಮೇಧಾ ಅಭಿಪ್ರಾಯಪಟ್ಟರು.

Write A Comment