ಬೆಂಗಳೂರು, ಮಾ. ೨೬: ಮಹಾರಾಣಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಪ್ರತಿಭಟನೆ ತಾರಕಕ್ಕೇರಿದ್ದು, ಇಂದು ಪ್ರಿನ್ಸಿಪಾಲ್ಗಾಗಿ ವಿದ್ಯಾರ್ಥಿನಿಯರ ಮಧ್ಯೆ ಮಾರಾಮಾರಿ ನಡೆದಿದೆ.
ಕಾಲೇಜು ಆವರಣದಲ್ಲಿ ದುರ್ಗಿಗಳಾದ ವಿದ್ಯಾರ್ಥಿನಿಯರು, ಪ್ರಿನ್ಸಿಪಾಲ್ ಬೇಕು ಎಂದು ಹಲವರು ಪ್ರತಿಭಟನೆ ನಡೆಸುತ್ತಿದ್ದರೆ, ಇನ್ನು ಕೆಲವರು ಪ್ರಿನ್ಸಿಪಾಲ್ ಬೇಡವೆಂದು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಎರಡು ಗುಂಪುಗಳ ನಡುವೆ ಇಂದು ಹೊಡೆದಾಟ ನಡೆದಿದ್ದು, ಕಲಾ ಮತ್ತು ಕಾಮರ್ಸ್ ಕಾಲೇಜಿನ ವಿದ್ಯಾರ್ಥಿನಿಯರು ಪರಸ್ಪರ ಜುಟ್ಟು ಹಿಡಿದು ಹೊಡೆದಾಡಿದ್ದಾರೆ.
ಪ್ರಿನ್ಸಿಪಾಲ್ ಬೇಕೆಂದು ಕಲಾ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದರೆ, ಇವರಿಗೆ ವಿರುದ್ಧವಾಗಿ ಪ್ರಿನ್ಸಿಪಾಲ್ ಬೇಡವೆಂದು ಕಾಮರ್ಸ್ ವಿದ್ಯಾರ್ಥಿನಿಯರು ಧರಣಿ ಕುಳಿತ್ತಿದ್ದಾರೆ. ಎರಡು ಗುಂಪುಗಳ ವಿದ್ಯಾರ್ಥಿನಿಯರ ನಡುವೆ ನಿನ್ನೆಯಿಂದಲೇ ಜಗಳ ನಡೆಯುತ್ತಿದೆ.