ಹೊಸಬರ “ಶ್ರೀಚಕ್ರಂ” ಸದ್ದುಗದ್ದಲವಿಲ್ಲದೆ ಚಿತ್ರೀಕರಣ ಪೂರ್ಣಗೊಂಡಿದ್ದು ಬಿಡುಗಡೆಯ ಸೂಕ್ತ ದಿನಕ್ಕಾಗಿ ಎದುರು ನೋಡುತ್ತಿದೆ.ಎಲ್ಲವೂ ಅಂದುಕೊಂಡಂತೆ ಆದರೆ ಮುಂದಿನ ತಿಂಗಳು ಚಿತ್ರವನ್ನು ತೆರೆಗೆ ತರುವ ಆಲೋಚನೆ ಚಿತ್ರತಂಡಕ್ಕಿದೆ.
“ಶ್ರೀಚಕ್ರಂ”ಚಿತ್ರದ ಮೂಲಕ ಅರವ್ ಸೂರ್ಯ ಚಂದನವನಕ್ಕೆ ನಾಯಕನಾಗಿ ಪರಿಚಯವಾಗುತ್ತಿದ್ದು,ನಾಯಕನಾಗುವ ಆಸೆಯಿಂದ ವೈಜಾಕ್ನಲ್ಲಿ ತರಬೇತಿ ಪಡೆದುಕೊಂಡು ಬಂದಿದ್ದಾರೆ. ನಾಯಕಿ ಟೀನಾ ಪೊನ್ನಪ್ಪ ಅವರಿಗೂ ಇದು ಮೊದಲ ಚಿತ್ರ. ಚಿತ್ರಕ್ಕೆ ನಾಯಕ ಅರವ್ ಸೂರ್ಯ ಅವರ ಸಂಬಂಧಿಕರೇ ಬಂಡವಾಳ ಹಾಕಿದ್ದಾರೆ.
ಚಿತ್ರದ ಬಗ್ಗೆ ಹೇಳಿಕೊಳ್ಳಲು ಕಳೆದವಾರ ಪತ್ರಿಕಾ ಗೋಷ್ಟಿ ಕರೆಯಲಾಗಿತ್ತು.ಅಲ್ಲಿ ಮೊದಲು ಮಾತಿಗಿಳಿದ ನಿರ್ದೇಶಕ ಜೀ.ಜೀ, ಬೆಂಗಳೂರು, ಮಧೂಗಿರಿ, ಸಕಲೇಶಪುರ, ಮಾರಿಕಣಿವೆ, ಚಿತ್ರದುರ್ಗ ಸೇರಿದಂತೆ ಮತ್ತಿತರ ಕಡೆ ಚಿತ್ರೀಕರಿಸಲಾಗಿದೆ.
ಚಿತ್ರ ಸಂಪೂರ್ಣ ಮುಗಿದಿದ್ದು ಮುಂದಿನ ತಿಂಗಳು ತೆರೆಗೆ ತರುವ ಉದ್ದೇಶವಿದೆ. ಹೊಸಬರಾದರೂ ಚಿತ್ರದ ಗುಣಮಟ್ಟದಲ್ಲಿ ಎಲ್ಲಿಯೂ ರಾಜಿ ಮಾಡಿಕೊಂಡಿಲ್ಲ.ಚಿತ್ರದಲ್ಲಿ ನಾಯಕನಿಗೆ ಎರಡು ಶೇಡ್ಗಳಿವೆ. ಒಂದು ಲವರ್ ಬಾಯ್ ಮತ್ತೊಂದು ವಿಭಿನ್ನವಾಗಿದೆ ಅದನ್ನು ಚಿತ್ರದಲ್ಲಿ ನೋಡಬೇಕು ಎಂದು ಹೇಳಿಕೊಂಡರು.
ನಾಯಕ ಅರವ್ ಸೂರ್ಯ,ಚಿತ್ರ ಚೆನ್ನಾಗಿ ಮೂಡಿ ಬಂದಿದೆ.ಜೊತೆಗೆ ನಿರ್ದೇಶಕರು ತಪ್ಪುಗಳನ್ನು ತಿದ್ದಿದ್ದಾರೆ. ಉತ್ತಮ ಚಿತ್ರವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರೆ ಮೊದಲ ಚಿತ್ರ. ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಚಿತ್ರದಲ್ಲಿ ಒಳ್ಳೆಯ ಪಾತ್ರ ಸಿಕ್ಕಿದೆ ಎಂದರು.
ನಿರ್ಮಾಪಕ ರಾಮ್ ಪ್ರಸಾದ್, ಚಿತ್ರಕ್ಕೆ ಎಷ್ಟು ಬೇಕೋ ಅಷ್ಟು ಬಂಡವಾಳ ಹಾಕಿದ್ದೇವೆ. ಗುಣಮಟ್ಟದಲ್ಲಿ ಎಲ್ಲಿಯೂ ರಾಜಿ ಮಾಡಿಕೊಂಡಿಲ್ಲ.ಒಳ್ಳೆ ಸಿನಿಮಾ ಮಾಡುವುದಷ್ಟೇ ನಮ್ಮ ಗುರಿ ನಿಮ್ಮೆಲ್ಲರ ಸಹಕಾರ ಮತ್ತು ಪ್ರೋತ್ಸಾಹ ಬೇಕು ಎಂದರು.
ಕಾರ್ಯಕಾರಿ ನಿರ್ಮಾಪಕ ತಿಪ್ಪೇಸ್ವಾಮಿ,ರಂಗಭೂಮಿಯ ಹಿನ್ನೆಲೆ ಇರುವ ಅನೇಕ ಮಂದಿ ಚಿತ್ರದಲ್ಲಿದ್ದಾರೆ ಇದು ಚಿತ್ರಕ್ಕೆ ಪೂರಕವಾಗಿದೆ ಎಂದು ಹೇಳಿಕೊಂಡರು.
ಚಿತ್ರದಲ್ಲಿ ಬುಲ್ಲೆಟ್ ಪ್ರಕಾಶ್, ಶೋಬರಾಜ್ ಮತ್ತಿತರಿದ್ದಾರೆ.