ಕರ್ನಾಟಕ

ಆಸ್ತಿ ವಿಷಯಕ್ಕೆ ಅತ್ತೆಯನ್ನೇ ಕೊಂದ ಅಳಿಯ

Pinterest LinkedIn Tumblr

crimeಹಳೇಬೀಡು: ದೇವಿಹಳ್ಳಿ ಗ್ರಾಮದಲ್ಲಿ ಆಸ್ತಿಯನ್ನು ತನ್ನ ಹೆಸರಿಗೆ ಪರಭಾರೆ ಮಾಡಲಿಲ್ಲ ಎನ್ನುವ ಕಾರಣಕ್ಕೆ ಅಳಿಯನೊಬ್ಬ ಅತ್ತೆಯನ್ನೇ ಕೊಲೆ ಮಾಡಿದ್ದಾನೆ.

ಗಂಗಮ್ಮ(72) ಕೊಲೆಯಾಗಿ ಮೃತಪಟ್ಟಿರುವ ಮಹಿಳೆಯಾಗಿದ್ದಾಳೆ. ಆಕೆಯ ಅಳಿಯ ಮಂಜುನಾಥ (45) ಕಳೆದ ಒಂದು ವರ್ಷದಿಂದ ಆಸ್ತಿಯನ್ನು ತನ್ನ ಹೆಸರಿಗೆ ಬರೆಯುವಂತೆ ಅತ್ತೆ ಹಾಗು ಪತ್ನಿಯನ್ನು ಪೀಡಿಸುತ್ತಿದ್ದ ಎನ್ನಲಾಗಿದೆ. ಆದರೆ, ಗಂಗಮ್ಮ ಇತ್ತೀಚೆಗೆ ತನ್ನೆಲ್ಲಾ ಆಸ್ತಿಯನ್ನು ಮಗಳ ಹೆಸರಿಗೆ ನೊಂದಣಿ ಮಾಡಿಸಿದ್ದರು.

ಪತ್ನಿಯ ಹೆಸರಿಗೆ ಆಸ್ತಿಯನ್ನು ವರ್ಗಾಯಿಸಿರುವ ವಿಚಾರ ತಿಳಿದ ಆರೋಪಿ ಮಂಜುನಾಥ ಬುಧವಾರ ತಡರಾತ್ರಿ ಅತ್ತೆಯೊಂದಿಗೆ ಜಗಳವಾಡಿ ಅತ್ತೆಯ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆಗೈದಿದ್ದಾನೆ.

ಸದ್ಯ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಹಳೇಬೀಡು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Write A Comment