ಕರ್ನಾಟಕ

ಅಂಬಾರಿ ಸರ್ಕಾರದ ವಶಮಾಡಿ : ಸುಪ್ರೀಂ ಮೆಟ್ಟಿಲೇರಿದ ನಂಜರಾಜ ಅರಸ್‌

Pinterest LinkedIn Tumblr

11ಮೈಸೂರು : ರಾಜ ಮನೆತನದ ಬಳಿಯಿರುವ ವಿಶ್ವವಿಖ್ಯಾತ ಮೈಸೂರಿನ ಚಿನ್ನದ ಅಂಬಾರಿಯನ್ನು ಸರ್ಕಾರ ಸುಪರ್ದಿಗೆ ಪಡೆಯಬೇಕೆಂದು ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿ ವಜಾಗೊಂಡ ಹಿನ್ನಲೆಯಲ್ಲಿ ಇತಿಹಾಸ ತಜ್ಞ ಪ್ರೊಫೆಸರ್‌ ಪಿ.ವಿ.ನಂಜರಾಜ ಅರಸ್‌ ಅವರು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ.

1998 ರ ಖಾಯ್ದೆಯಡಿ ಅಂಬಾರಿಯನ್ನು ಸರ್ಕಾರ ಸುಪರ್ದಿಗೆ ಪಡೆಯಬೇಕು ಮತ್ತು ದಸರಾ ವೇಳೆ ಜಿಲ್ಲಾಡಳಿತ ರಾಜಮನೆತನಕ್ಕೆ ನೀಡುವ ಗೌರವ ಧನ ರದ್ದು ಮಾಡಬೇಕೆಂದು ನಂಜರಾಜ್‌ ಅರಸ್‌ ಅವರು ಹೈಕೋರ್ಟ್‌ನಲ್ಲಿ ಕಳೆದ ವರ್ಷ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ಗೆತ್ತಿಕೊಂಡ ಕೋರ್ಟ್‌ ಅರ್ಜಿಯನ್ನು ವಜಾ ಗೊಳಿಸಿತ್ತು.

ಇದೀಗ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸುಪ್ರೀಂನಲ್ಲಿ ಅರ್ಜಿ ಸಲ್ಲಿಸಲಾಗಿದ್ದು ಶೀರ್ಘ‌ ಅರ್ಜಿ ವಿಚಾರಣೆ ನಡೆಸುವ ಸಾಧ್ಯತೆಗಳಿವೆ.

-ಉದಯವಾಣಿ

Write A Comment