ಕರ್ನಾಟಕ

ಬಸ್ಸಿನ ಬಾಯ್ಲರ್ ಸಿಡಿದು ಗಾಯಗೊಂಡಿದ್ದ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವು

Pinterest LinkedIn Tumblr

boyತಿ.ನರಸೀಪುರ, ಮಾ.17- ಸಾರಿಗೆ ಬಸ್ಸಿನ ಬಾಯ್ಲರ್ ಸಿಡಿದು ಗಂಭೀರ ಗಾಯಾಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಾಲ್ಲೂಕಿನ ನಿಲಸೋಗೆ ಗ್ರಾಮದ ಶ್ರೀಕಂಠ ಎಂಬುವರ ಪುತ್ರ ಸಂಜುಕುಮಾರ್(14) ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಘಟನೆ ವಿಬಸ್ಸಿನ ಬಾಯ್ಲರ್ ಸಿಡಿದು ಗಾಯಗೊಂಡಿದ್ದ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವು.  ಶಿವರಾತ್ರಿ ಹಬ್ಬದ ಹಬ್ಬದಂದು ತಾಲ್ಲೂಕಿನ ನಿಲಸೋಗೆ ಗ್ರಾಮದ ಶ್ರೀಕಂಠ ರವರ ಪುತ್ರ ಸಂಜುಕುಮಾರ್ ತನ್ನ ತಾಯಿ ವಿಜಯಲಕ್ಷ್ಮಿ ಜೊತೆ ಶ್ರೀ ಮಲೈಮಹದೇಶ್ವರ ಬೆಟ್ಟಕ್ಕೆ ಸಾರಿಗೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದು ಬೆಟ್ಟದ ತುದಿಯಲ್ಲಿ ಬಸ್ ತೆರಳುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಬಸ್ಸಿನ ಬಾಯ್ಲರ್ ಸಿಡಿದಿದ್ದು ಪರಿಣಾಮ ಪಕ್ಕದಲ್ಲೇ ಕುಳಿತಿದ್ದ ಸಂಜುಕುಮಾರ್ ಮೇಲೆ ಬಾಯ್ಲರ್‌ನ ಬಿಸಿ ನೀರು ಚೆಲ್ಲಿ ಬಾಲಕ ಗಂಭೀರ ಗಾಯಾಗೊಂಡಿದ್ದ.

ತಕ್ಷಣ ಈತನನ್ನು ಬೆಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆ ತುರ್ತು ನಿಗಾ ಘಟಕಕ್ಕೆ ದಾಖಲು ಮಾಡಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.ಈ ಸಂಬಂಧ ಮಲೈ ಮಹದೇಶ್ವರ ಬೆಟ್ಟದ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment