ಕರ್ನಾಟಕ

ಬಿಎಂಟಿಸಿ ಬಸ್ಸಿಗೆ ಮಹಿಳೆ ಬಲಿ

Pinterest LinkedIn Tumblr

busಬೆಂಗಳೂರು: ಬಸ್ ರಿವರ್ಸ್ ತೆಗೆದುಕೊಳ್ಳುವ ವೇಳೆ ಮಹಿಳೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟ ಘಟನೆ ಶಿವಾಜಿನಗರದಲ್ಲಿ ಸೋಮವಾರ ನಡೆದಿದೆ.

ಮೃತ ಸರೋಜಮ್ಮ (55) ಬಿಎಂಟಿಸಿಯಲ್ಲಿ ಗುತ್ತಿಗೆದಾರಳಾಗಿ ಕಾರ್ಯನಿರ್ವಹಿಸುತ್ತಿದ್ದರು. ಎಂದಿನಂತೆ ಅವರು ಇಂದು ಫ್ಲಾಟ್ ನಂ. 5ರಲ್ಲಿ ಸ್ವಚ್ಛತಾ ಕಾರ್ಯನಿರ್ವಹಿಸುತ್ತಿದ್ದರು. ಈ ವೇಳೆ ನಿಲ್ದಾಣಕ್ಕೆ ಬಂದ ನಂ. ಕೆಎ 01 ಎಫ್ 3165, ಡಿಪೋ 26ರ ಬಿಎಂಟಿಸಿ ಬಸ್ ಮುಂದೆ ಹೋಗಿದೆ. ಬಸ್ ಮುಂದೆ ಹೋಗಿದೆಯೆಂದು ಮಹಿಳೆ ತಮ್ಮ ಕೆಲಸವನ್ನು ಮುಂದುವರೆಸಿದ್ದಾರೆ. ಆದರೆ ಚಾಲಕ ಫ್ಲಾಟ್ ಪಾರಂನಲ್ಲಿ ಬಸ್ ನಿಲ್ಲಿಸಲು ರಿವರ್ಸ್ ತೆಗೆದುಕೊಂಡಿದ್ದಾರೆ. ಈ ವೇಳೆ ಬಸ್ಸನ್ನು ಗಮನಿಸಿದ ಸರೋಜಮ್ಮ ಅವರು ಬಸ್ಸಿನಡಿ ಸಿಲುಕಿಕೊಂಡು ಮೃತಪಟ್ಟಿದ್ದಾರೆ.

ಘಟನಾ ಸ್ಥಳಕ್ಕಾಗಮಿಸಿರುವ ಶಿವಾಜಿನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಚಾಲಕನನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ. ಸರೋಜಮ್ಮ ಅವರ ಮೃತದೇಹವನ್ನು ಬೌರಿಂಗ್ ಆಸ್ಪತ್ರೆಗೆ ಕಳುಹಿಸಲಾಗಿದೆ.

Write A Comment