ಕರ್ನಾಟಕ

ಮನೆಯ ಛಾವಣಿ ಕುಸಿದು ಇಬ್ಬರು ಸೋದರರ ಸಾವು, ತಾಯಿಗೆ ಗಾಯ

Pinterest LinkedIn Tumblr

broಶ್ರೀನಿವಾಸಪುರ, ಫೆ.25- ಮನೆಯೊಂದರ ಛಾವಣಿ ಕುಸಿದು ಮಲಗಿದ್ದ ಸೋದರರಿಬ್ಬರು ಸಾವನ್ನಪ್ಪಿದ್ದರೆ, ತಾಯಿ-ಮಗಳು ಪಾರಾಗಿರುವ ಘಟನೆ ತಾಲೂಕಿನ ಆಲಂಗಿರಿ ಗ್ರಾಮದಲ್ಲಿ ಜರುಗಿದೆ. ಗ್ರಾಮದ ವಾಸಿಗಳಾದ ಆನಂದ್ (16) ಮತ್ತು ಚೇತನ್ (18) ಮೃತಪಟ್ಟಿದ್ದಾರೆ.

ತಾಯಿ ಮುನಿವೆಂಕಟಮ್ಮ ಗಾಯಗೊಂಡಿದ್ದು, ಮಗಳು ಭವ್ಯಾ (13) ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾಳೆ. ಮುನಿವೆಂಕಟಮ್ಮ ಗಂಡನನ್ನು ತೊರೆದು ಮೂವರು ಮಕ್ಕಳೊಂದಿಗೆ ಹಳೆ ಮನೆಯಲ್ಲಿ ವಾಸವಾಗಿದ್ದರು. ರಾತ್ರಿ ಎಲ್ಲರೂ ಮಲಗಿದ್ದಾಗ 9.30ರ ಸುಮಾರಿನಲ್ಲಿ ಛಾವಣಿ ಕುಸಿದು ಬಿದ್ದಿದೆ.

ಶಬ್ದ ಕೇಳಿ ಬಂದ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಅಗ್ನಿಶಾಮಕ ದಳದವರೊಂದಿಗೆ ಆಗಮಿಸಿದ ಪೊಲೀಸರು ಅವಶೇಷಗಳಡಿ ಸಿಲುಕಿದ್ದ ನಾಲ್ವರನ್ನು ಹೊರಕ್ಕೆ ತೆಗೆದಿದ್ದಾರೆ. ಗಂಡು ಮಕ್ಕಳಿಬ್ಬರಿಗೂ ತಲೆಗೆ ಪೆಟ್ಟಾಗಿದ್ದೇ ಅಲ್ಲದೆ ಅವಶೇಷಗಳಡಿ ಸಿಲುಕಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ.

ತಾಯಿಗೆ ಗಾಯವಾಗಿದ್ದು, ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಮಗಳು ಭವ್ಯಾ ಆಶ್ಚರ್ಯಕರ ರೀತಿಯಲ್ಲಿ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾಳೆ. ಈ ಸಂಬಂಧ ಶ್ರೀನಿವಾಸಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Write A Comment