ಬೆಂಗಳೂರು: ಬೆಂಗಳೂರಿನ ಶಾಂತಿನಗರದ ಕೇಂದ್ರ ಕಚೇರಿ ಬಳಿ ಕೆಎಸ್ಆರ್ಟಿಸಿ ಚಾಲಕ ಶ್ರೀರಾಮ ಸೀಮೆಎಣ್ಣೆ ಸುರಿದುಕೊಂಡು ಬೆಂಕಿಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸಂಭವಿಸಿದೆ. ಕೂಡಲೇ ಪೊಲೀಸರು ಅವನ ಆತ್ಮಹತ್ಯೆ ಯತ್ನವನ್ನು ತಪ್ಪಿಸಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಸುಮಾರು 19 ವರ್ಷಗಳಿಂದ ಚಾಲಕನಾಗಿ ಸೇವೆ ಸಲ್ಲಿಸುತ್ತಿದ್ದರೂ ಕೆಲಸ ಖಾಯಂ ಆಗಿರಲಿಲ್ಲ. ಇದರಿಂದ ಶ್ರೀರಾಮ ತೀವ್ರ ಬೇಸರಗೊಂಡಿದ್ದರು. ಸೇವೆ ಖಾಯಮಾತಿಗೆ 20,000 ರೂ.ಲಂಚವನ್ನು ಕೆಎಸ್ಆರ್ಟಿಸಿ ಅಧಿಕಾರಿಗಳು ಒತ್ತಾಯಿಸಿದ್ದರು. ಇದರಿಂದ ಮನನೊಂದ ಚಾಲಕ ಶ್ರೀರಾಮ ಆತ್ಮಹತ್ಯೆಗೆ ಯತ್ನಿಸಿದರು.
ಅಧಿಕಾರಿಗಳಿಗೆ ಲಂಚ ನೀಡದಿದ್ದರಿಂದ ಮಾನಸಿಕ ಕಿರುಕುಳ ನೀಡಿದ್ದಾರೆಂದು ಡೆತ್ ನೋಟ್ ಬರೆದಿಟ್ಟು ಮನೆಬಿಟ್ಟು ಹೋಗಿದ್ದ. ನ. 28ರಂದು ಚಾಲಕನ ಪತ್ನಿ ಜಯಲಕ್ಷ್ಮಿ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು.